• ಡಾ.ಎ.ಜಿ.ರವಿಶಂಕರ್

ಜಾಯಿ ಕಾಯಿಯು ತೀಕ್ಷ್ನ ಸುಗಂಧ ದ್ರವ್ಯವಾಗಿದ್ದು, ಭಕ್ಷ್ಯಗಳಿಗೆ ಅಲ್ಪ ಪ್ರಮಾಣದಲ್ಲಿ ಹಾಕಿದರೂ ಉತ್ತಮ ರುಚಿ ಹಾಗು ಪರಿಮಳವನ್ನು ನೀಡುತ್ತದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವಾರು ಅನಾರೋಗ್ಯದ ಸಂದರ್ಭಗಳಲ್ಲಿ ಜಾಯಿ ಕಾಯಿಯ ಉಪಯೋಗವು ಉತ್ತಮ ಫಲಿತಾಂಶವನ್ನು ನೀಡುತ್ತದೆ.

ಜಾಹೀರಾತು
  1. ತಲೆ ನೋವು ಇದ್ದಾಗ ಜಾಯಿ ಕಾಯಿಯನ್ನು ಹುಡಿಮಾಡಿ ನೀರಿನಲ್ಲಿ ಕಲಸಿ ಹಣೆಗೆ ಲೇಪ ಹಾಕಬೇಕು.
  2. ಶರೀರದ ಸಂಧುಗಳಲ್ಲಿ ಊಟ ಹಾಗು ನೋವು ಇದ್ದರೆ ಜಾಯಿಕಾಯಿಯ ಹುಡಿಯನ್ನು ಗೋಮೂತ್ರದಲ್ಲಿ ಕಲಸಿ ಸಂಧುಗಳಿಗೆ ಹಚ್ಚಬೇಕು.
  3. ಶರೀರ ಶೀತಮಯವಾಗಿದ್ದರೆ ಜಾಯಿಕಾಯಿಯ ಎಣ್ಣೆ ಕಾಯಿಸಿ ಪೂರ್ತಿ ದೇಹದ ಮೇಲೆ ಲೇಪಿಸಬೇಕು.
  4. ತುರಿಕೆಯುಕ್ತ ಚರ್ಮವ್ಯಾಧಿಗಳಲ್ಲಿ ಜಾಯಿಕಾಯಿಯನ್ನು ಪುಡಿಮಾಡಿ ಹಚ್ಚಬೇಕು ಅಥವಾ ಎಣ್ಣೆ ಕಾಯಿಸಿ ಹಚ್ಚಿದರೂ ಆದೀತು.
  5. ದುರ್ಗಂಧಯುಕ್ತ ಹಳೆಯ ಹುಣ್ಣುಗಳ ಮೇಲೆ ಜಾಯಿಕಾಯಿಯ ಹುಡಿಯನ್ನು ಹಾಕುವುದರಿಂದ ಹುಣ್ಣು ಶುದ್ಧಿಯಾಗಿ ಬೇಗನೆ ವಾಸಿಯಾಗುತ್ತದೆ.
  6. ಚಿಕ್ಕ ಮಕ್ಕಳಿಗೆ ಶೀತ ಆದಾಗ ಜಾಯಿಕಾಯಿ ಎಣ್ಣೆಯನ್ನು ಬಿಸಿಮಾಡಿ ನೆತ್ತಿಯಮೇಲೆ ಹಾಕಬೇಕು.
  7. ಜಾಯಿಕಾಯಿ ಎಣ್ಣೆಯನ್ನು ಬಿಸಿಮಾಡಿ ತಲೆಗೆ ಹಚ್ಚುವುದರಿಂದ ತಲೆಯ ಹೊಟ್ಟು ಹಾಗು ಹೇನು ನಿವಾರಣೆಯಾಗುತ್ತದೆ.
  8. ನಿದ್ರಾ ಹೀನತೆಯಲ್ಲೂ ಸಹ ಜಾಯಿಕಾಯಿ ಎಣ್ಣೆಯು ಉತ್ತಮ ಫಲಿತಾಂಶವನ್ನು ನೀಡುತ್ತದೆ.
  9. ಸಣ್ಣತುಂಡು ಜಾಯಿಕಾಯಿಯನ್ನು ಜಗಿಯುವುದರಿಂದ ಬಾಯಿಯ ದುರ್ಗಂಧ ನಿವಾರಣೆಯಾಗುತ್ತದೆ ಮತ್ತು ಗಂಟಲಿನ ಕಫ  ಕರಗಿ ಸ್ವರ ಶುದ್ಧಿಯಾಗುತ್ತದೆ.
  10. ಮಕ್ಕಳು ಆಥವಾ ದೊಡ್ಡವರಲ್ಲಿ ಬೇಧಿಯ ಸಮಸ್ಯೆ ಇದ್ದಾಗ ಜಾಯಿಕಾಯಿಯನ್ನು ಸ್ವಲ್ಪ ಪ್ರಮಾಣದಲ್ಲಿ ಜೇನುತುಪ್ಪದ  ಜೊತೆ ಸೇವಿಸಬೇಕು.
  11. ಜಾಯಿಕಾಯಿಯು ಬಾಯಾರಿಕೆ ಹಾಗು ವಾಕರಿಕೆಯನ್ನು ಕಡಿಮೆ ಮಾಡುತ್ತದೆ.
  12. ರಕ್ತಭೇದಿಯ ಸಂದರ್ಭಗಳಲ್ಲಿ ಜಾಯಿಕಾಯಿಯನ್ನು ನೀರಿಗೆ ಹಾಕಿ ಕುದಿಸಿ ಆರಿಸಿದ ನೀರನ್ನು ರೋಗಿಗೆ ಕುಡಿಯಲು ಕೊಡಬೇಕು
  13. ಶೀತ,ಕೆಮ್ಮು,ದಮ್ಮು ಹಾಗು ಬಿಕ್ಕಳಿಕೆ ಇದ್ದಾಗ ಜಾಯಿಕಾಯಿಯನ್ನು ಜೇನುತುಪ್ಪದಲ್ಲಿ ಮಿಶ್ರಮಾಡಿ ಸೇವಿಸಬೇಕು.
  14. ಮುಟ್ಟಿನ ಸ್ರಾವ ಸರಿಯಾಗಿ ಆಗದಿದ್ದಲ್ಲಿ ಜಾಯಿಕಾಯಿಯನ್ನು ಅಲ್ಪಪ್ರಮಾಣದಲ್ಲಿ ಸೇವಿಸಬೇಕು.
  15. ಭೆದಿಯುಕ್ತ ಜ್ವರದಲ್ಲಿ ಜಾಯಿಕಾಯಿಉ ಉತ್ತಮ ಪರಿಣಾಮವನ್ನು ನೀಡುತ್ತದೆ.
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Dr. Ravishankar A G

ಆಯುರ್ವೇದ ವೈದ್ಯಕೀಯ ಪದ್ಧತಿಯಲ್ಲಿ ಎಂ.ಎಸ್. (ಸ್ನಾತಕೋತ್ತರ) ಪದವೀಧರರಾಗಿರುವ ಡಾ.ರವಿಶಂಕರ ಎ.ಜಿ, ಮೂಡುಬಿದಿರೆ ಆಳ್ವಾಸ್ ಆಯುರ್ವೇದ ಮಹಾವಿದ್ಯಾಲಯ ಸ್ನಾತಕೋತ್ತರ ವಿಭಾಗ ಪ್ರಾಧ್ಯಾಪಕರು. ವಿಟ್ಲದಲ್ಲಿ ಚಿಕಿತ್ಸಾಲಯವನ್ನೂ ಹೊಂದಿದ್ದಾರೆ. ಮೂಲವ್ಯಾಧಿ, ಭಗಂಧರ, ಸೊಂಟನೋವು, ವಾತರೋಗ, ಶಿರಶೂಲ ಇತ್ಯಾದಿಗಳಲ್ಲಿ ಕ್ಷಾರಕರ್ಮ, ಅಗ್ನಿಕರ್ಮ, ರಕ್ತಮೋಕ್ಷಣ ಮೊದಲಾದ ವಿಶೇಷ ಚಿಕಿತ್ಸೆ ನೀಡುವುದರಲ್ಲಿ ಪರಿಣತರು.