ಕಂದಾಯ ಇಲಾಖೆ ವತಿಯಿಂದ ಶ್ರೀ ಕ್ಷೇತ್ರ ಕಾರಿಂಜೇಶ್ವರ ದೇವಸ್ಥಾನ ಸಭಾಂಗಣದಲ್ಲಿ 84 ಗ್ರಾಮಗಳ ಹುಜೂರ್ ಜಮಾಬಂದಿ ನಡೆಯಿತು.
ಸಹಾಯಕ ಆಯುಕ್ತ ರೇಣುಕಾ ಪ್ರಸಾದ್ ಜಮಾಬಂದಿ ನಡೆಸಿದರು. ಈ ಸಂದರ್ಭ ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಉಪತಹಶೀಲ್ದಾರ್ ಭಾಸ್ಕರ ರಾವ್, ಕಾರಿಂಜೇಶ್ವರ ದೇವಸ್ಥಾನದ ಪಿ.ಜಿನರಾಜ ಆರಿಗ, ಕಂದಾಯ ಇಲಾಖೆಯ ಲಲಿತಾ ಶೆಟ್ಟಿ, ದಿವಾಕರ್, ರಾಮ ಕೆ, ನವೀನ್, ತಾರಾನಾಥ ಮೊದಲಾದವರು ಉಪಸ್ಥಿತರಿದ್ದರು. ಗ್ರಾಮಕರಣಿಕ ಅಮೃತಾಂಶು ಕೆ.ಎಸ್. ಪ್ರಾರ್ಥಿಸಿದರು.
(more…)