ನಮ್ಮ ಭಾಷೆ

ತುಳುವಿನ ಹಿರಿಮೆ ಮೆರೆದಂಥ ಕಾಲವದು

ಇಂದು ತುಳು ಮಾತನಾಡಲು ಹಿಂಜರಿಯುವ ಹೊತ್ತಿನಲ್ಲಿ ಹಿಂದೊಂದು ಕಾಲದಲ್ಲಿ ತುಳು ಭಾಷೆ ವೈಭವದಿಂದ ಮೆರೆದಿತ್ತು. ತುಳುವರು ಪ್ರಭಾವಶಾಲಿಯಾಗಿದ್ದರು.

  • ಬಿ.ತಮ್ಮಯ್ಯ
  • ಅಂಕಣ: ನಮ್ಮ ಭಾಷೆ

ಜಾಹೀರಾತು

ನನ್ನರ ಕಾಲದಲ್ಲಿ ತುಳು ಮತ್ತು ತಮಿಳು ಭಾಷೆಯು ಬಹಳ ಸಮೃದ್ಧಿ ಪಡೆದಿತ್ತು. ಸಂಗಕಾಲದ ಅನೇಕ ಕವಿತೆಗಳು ತಮಿಳು ಭಾಷೆಯ, ತುಳುನಾಡಿನ ನವಿಲುಗಳು, ಕಾಡಿನ ವರ್ಣನೆ, ಕುಡುಮಲೈ (ಪಶ್ಚಿಮ ಘಟ್ಟದ ಜರಿಗಳಲ್ಲಿ ಹರಿಯುವ ನೀರಿನ ವರ್ಣನೆ ಮಾಡುತ್ತಾ ಬಿಳಿ ಬಟ್ಟೆಗಳನ್ನು ಒಣಗಿಸಿದಂತೆ) ಎಂದು ವರ್ಣಿಸಲಾಗಿದೆ.

ತುಳು ಮತ್ತು ತಮಿಳು ಭಾಷೆಗಳಲ್ಲಿ ಎರಡು ಭಾಷೆಗಳ ಶಬ್ದಗಳು ಕಂಡುಬರುತ್ತವೆ. ವರಕಲ್ಲ್, ಅಮೆದಿಕಲ್ಲು ಬಿದಿರಿನ ಬಗ್ಗೆ ಮೂಡಬಿದ್ರೆ, ಪಡುಬಿದ್ರೆ ಎಂದು ಕಾರ್ಕಲ್ ಕರಿಕಲ್ಲಿನ ಊರು ಎಂದು ಗುರುತಿಸಬಹುದು. ಅನೇಕ ತುಳು ತಮಿಳು ಶಬ್ದಗಳು ಒಂದೇ ರೀತಿ ಇದ್ದು, ತುಳುವರ ತಮಿಳರ ಜೀವನ ಪದ್ಧತಿಯೂ ಸಾಮಾನ್ಯವಾಗಿತ್ತು. ಕ್ರಿ.ಶ. 4ನೇ ಶತಮಾನದ ನಂತರ ಚೇರನಾಡು ಮುಂದೆ ಕೇರಳವಾಗಿ ಅದರ ಭಾಷೆ ಮಲೆಯಾಳವಾದ ನಂಥರ, ತುಳು ಮತ್ತು ತಮಿಳಿನ ಸಂಪರ್ಕ ದೂರವಾಯಿತು. ತಮಿಳಿನ ಸಂಗ, ಸಾಹಿತ್ಯದಲ್ಲಿ ತುಳು ವಿಚಾರಗಳಿರಲು ಇದೇ ಕಾರಣ.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
B Thammayya

ತುಳು ಭಾಷೆ ಮಾತಾಡೋದು ಸುಲಭ. ಲಿಪಿ ವಿಚಾರ ಬಂದಾಗ ಹಿಂದೇಟು ಹಾಕುತ್ತೇವೆ. ಕಂದಾಯ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರಾಗಿರುವ ಬಿ.ಸಿ.ರೋಡಿನ ಬಿ.ತಮ್ಮಯ್ಯ, ತುಳು ಲಿಪಿಯನ್ನು ಸರಳವಾಗಿಸುತ್ತಾರೆ. ಹಿಂದಿರುಗಿ ನೋಡಿದಾಗ ಸಹಿತ ಹಲವು ಪುಸ್ತಕಗಳನ್ನು ಬರೆದಿರುವ ಅವರು ಕಸಾಪ ತಾಲೂಕು ಘಟಕ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.