ಬಂಟ್ವಾಳ

ಮನೇಲೇ ಕುಳಿತಿದ್ದ ಬಾಲಕ ಮರಳಿ ಶಾಲೆಗೆ

bantwalnews.com report

ಶಿಕ್ಷಕಿಯ ಮೇಲಿನ ಭಯದಿಂದ ಶಾಲೆಗೆ ಹೋಗದೆ ಅನಾರೋಗ್ಯದ ನೆಪವೊಡ್ಡಿ ಮನೆಯಲ್ಲಿ ಉಳಿದಿದ್ದ ಬಾಲಕನಿಗೆ ಧೈರ್ಯ ತುಂಬಿ ಮತ್ತೆ ಶಾಲೆಗೆ ಕರೆ ತರುವಲ್ಲಿ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಯಶಸಿಯಾಗಿದೆ.

ಜಾಹೀರಾತು

ಇಲ್ಲಿನ ಮೂಡನಡುಗೋಡು ಗ್ರಾಮದ  ಕೊರಗ ಕಾಲನಿಯಿಂದ  ದಡ್ಡಲಕಾಡು ಸರಕಾರಿ ಪ್ರಾಥಮಿಕ ಹಿರಿಯ ಶಾಲೆಯ ಎಂಟನೆ ತರಗತಿಗೆ ಬರುತ್ತಿದ್ದ ವಿದ್ಯಾರ್ಥಿ ಗಣೇಶ್ ಕಳೆದ ಹಲವು ಸಮಯಗಳಿಂದ ಶಾಲೆಗೆ ಬಾರದೆ ತಪ್ಪಿಸಿಕೊಳ್ಳುತ್ತಿದ್ದ. ಈ ಬಗ್ಗೆ ಅಧ್ಯಾಪಕರು ವಿಚಾರಿಸಿದಾಗ ಅನಾರೋಗ್ಯದಿಂದ ಶಾಲೆಗೆ ಬರಲಾಗುತ್ತಿಲ್ಲ ಎನ್ನುವ ಕಾರಣ ನೀಡುತ್ತಿದ್ದ.

ಶಾಲಾ ದತ್ತು ಸ್ವೀಕರಿಸಿದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದಲ್ಲಿ  ಸದಸ್ಯರು ವಿದ್ಯಾರ್ಥಿಯ ಭವಿಷ್ಯದ ದೃಷ್ಟಿಯಿಂದ ಸೋಮವಾರ ಬೆಳಿಗ್ಗೆ ಅವರ ಮನೆಗೆ ಭೇಟಿ ನೀಡಿ ವಿಚಾರಿಸಿದಾಗ ಆರಂಭದಲ್ಲಿ ಅನಾರೋಗ್ಯದ ನೆಪ ನೀಡಿದರೂ ಶಿಕ್ಷಣದ ಮಹತ್ವದ ಬಗ್ಗೆ ವಿದ್ಯಾರ್ಥಿಯ ಪೋಷಕರಿಗೆ ಮನವರಿಕೆ ಮಾಡಿದಾಗ ಶಿಕ್ಷಕಿಯೋರ್ವರಿಗೆ ಹೆದರಿ ಶಾಲೆಗೆ ಹೋಗದೆ ಉಳಿದಿರುವುದು ಗಮನಕ್ಕೆ ಬಂತು.

ವಿದ್ಯಾರ್ಥಿಯ ಮನವೊಲಿಸಿ ಇಂದಿನಿಂದಲೇ ಶಾಲೆಗೆ ಹೋಗುವಂತೆ ಪ್ರೇರಿಪಿಸುವಲ್ಲಿ ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್ ಸದಸ್ಯರ ಪ್ರಯತ್ನ ಯಶಸ್ವಿಯಾಯಿತು. ಈ ಸಂದರ್ಭ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್, ರಮೇಶ್ ಕುಲಾಲ್, ವಿಠಲ ಡಿ., ಗಂಗಾಧರ ಕುಲಾಲ್, ನವೀನ್ ಎಸ್., ದಿಲಿಪ್  ಡೆಚ್ಚಾರು, ವಿನೋದ್ ಕುಲಾಲ್ ಹಾಜರಿದ್ದರು.

ಜಾಹೀರಾತು
ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Bantwal News

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ