ಬಿಎಸ್ಎನ್ಎಲ್ನಲ್ಲಿ ನಾಲ್ಕು ದಶಕಗಳ ಕಾಲ ಕರ್ತವ್ಯ ಸಲ್ಲಿಸಿ ನಿವೃತ್ತಿ ಹೊಂದಿದ ಕಚೇರಿ ಅಧೀಕ್ಷಕಿ ಉಷಾ ಪ್ರಭಾಕರ್ ಅವರ ಬೀಳ್ಕೊಡುಗೆ ಸಮಾರಂಭ ಇತ್ತೀಚೆಗೆ ಬಿ.ಸಿ.ರೋಡಿನ ಲಯನ್ಸ್ ಸೇವಾ ಭವನದಲ್ಲಿ ನಡೆಯಿತು.
ಸಹಾಯಕ ಮುಖ್ಯ ವ್ಯವಸ್ಥಾಪಕ ವಿಠಲ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಹಾಸನದ ನಿವೃತ್ತ ಮುಖ್ಯ ವ್ಯವಸ್ಥಾಪಕ ಮಹಾಬಲ ಶೆಟ್ಟಿ ಭಾಗವಹಿಸಿದ್ದರು. ಕೆ.ಎಸ್. ಆಳ್ವ, ಶೀನಪ್ಪ ನಾಯಕ, ಶಂಕರಿ ಮೊದಲಾದವರು ಸಭಿಕರ ಪರವಾಗಿ ಮಾತನಾಡಿದರು. ದೇವದಾಸ ಸ್ವಾಗತಿಸಿದರು, ಜಯರಾಂ ಪ್ರಸ್ತಾವಿಸಿದರು. ಈಶ್ವರ ಭಟ್ ವಂದಿಸಿದರು, ಯಶೋಧ ಕಾರ್ಯಕ್ರಮ ನಿರೂಪಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…