ಬಂಟ್ವಾಳ

ಕ್ರಿಸ್ ಮಸ್ ಸಂಭ್ರಮ, ಇಗರ್ಜಿಗಳಲ್ಲಿ ದೀಪಾಲಂಕಾರ

ಕ್ರಿಸ್ಮಸ್ ಹಬ್ಬ ಆಚರಣೆಗೆ ಎಲ್ಲೆಡೆ ವ್ಯಾಪಕ ಸಿದ್ಧತೆ. ಕ್ರೈಸ್ತ ಬಾಂಧವರು ಈಗಾಗಲೇ ಹಬ್ಬದ ಸಿದ್ಧತೆ ನಡೆಸುತ್ತಿದ್ದಾರೆ.

ಲೊರೆಟ್ಟೋ ಚರ್ಚ್

ಸರ್ವಶಕ್ತ ದೇವರು ನಮ್ಮೀ ಲೋಕಕ್ಕೆ ತಮ್ಮ ಏಕಮಾತ್ರ ಪುತ್ರರನ್ನು ಕಾಣಿಕೆಯಾಗಿ ನೀಡಿದ ಹಬ್ಬವೇ ಕ್ರಿಸ್ಮಸ್.

ದೇವ ಕುಮಾರ ಯೇಸುಕ್ರಿಸ್ತರು ಈ ಧರೆಯಲ್ಲಿ ಹುಟ್ಟಿದಾಗ ಅವರ ದರ್ಶನ ಪಡೆಯಲು ದೂರ ರಾಷ್ಟ್ರಗಳಿಂದ ಬಂದು ಅವರನ್ನು ಹುಡುಕಿ, ಅವರ ಸನ್ನಿಧಿಯಲ್ಲಿ ತಮ್ಮ ಕಾಣಿಕೆ ಅರ್ಪಿಸಿದರು. ಮೂವರು ಜ್ಞಾನಿಗಳು. ಈ ಕಾರಣಗಳಿಂದ ಕ್ರಿಸ್ಮಸ್ ಹಬ್ಬ ಕಾಣಿಕೆಗಳ ಹಬ್ಬ ಎಂದೇ ಕರೆಯಲಾಗುತ್ತದೆ. ಕಾಣಿಕೆಯೆಂದರೆ ಕೇವಲ ಪಡೆದುಕೊಳ್ಳುವುದಲ್ಲ. ಅದಕ್ಕೂ ಮಿಗಿಲಾಗಿ ನೀಡುವುದು. ದೇವರ ಸೃಷ್ಟಿಯಲ್ಲಿ ಯಾರು ಹಸಿದವರಾಗಿ ಉಡಲು ವಸ್ತ್ರವಿಲ್ಲದವರಾಗಿ, ನಿರ್ಗತಿಕರಾಗಿ ಇರಬಾರದು. ಉಳ್ಳವರು ತಮ್ಮ ಸಂಪನ್ಮೂಲಗಳನ್ನು ಇಲ್ಲದವರೊಂದಿಗೆ ಹಂಚಿ ಅವರಿಗೆ ಕಾಣಿಕೆಯಾಗಬೇಕು ಎಂದು ಕ್ರಿಸ್ಮಸ್ ಕರೆ ನೀಡುತ್ತದೆ.

ಜಾಹೀರಾತು

ಲೊರೆಟ್ಟೋ ಇಗರ್ಜಿ ಕಳೆದ ವರ್ಷ ಅಮೃತೋತ್ಸವವನ್ನು ದೊಡ್ಡ ಸಂಭ್ರಮದಿಂದ ಆಚರಿಸಲಾಗಿತ್ತು. ಚರ್ಚಿನ ಧರ್ಮಗುರುಗಳಾದ ವಂದನೀಯ ಎಲಿಯಾಸ್ ಡಿಸೋಜ ಅವರು ಇಗರ್ಜಿಯ ಹಾಗೂ ಆಸುಪಾಸಿನ ಎಲ್ಲ ಮತೀಯ ಜನರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.

ಚರ್ಚಿನ ಪಾಲನಾ ಮಂಡಳಿಯ ಉಪಾಧ್ಯಕ್ಷರಾಗಿ ರಿಚರ್ಡ್ ಮಿನೇಜಸ್ ಹಾಗೂ ಕಾರ್ಯದರ್ಶಿಯಾಗಿ ಸಿಪ್ರಿಯನ್ ಡಿಸೋಜ ಸೇವೆ ಸಲ್ಲಿಸುತ್ತಿದ್ದಾರೆ. ಕ್ರಿಸ್ಮಸ್ ಹಿನ್ನೆಲೆಯಲ್ಲಿ ಲೊರೆಟ್ಟೋದಲ್ಲಿ ವಿಶೇಷ ಸಂಭ್ರಮವಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

9 hours ago