ಕಲ್ಪವೃಕ್ಷ ತೆಂಗು ಉತ್ಪಾದಕರ ಫೆಡರೇಶನ್ ತೆಂಗು ಉತ್ಪಾದಕರ ಫೆಡರೇಶನ್ ಹಾಗೂ ದ.ಕ. ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ರೈತರಿಗೆ ಮಾಹಿತಿ ಮತ್ತು ಸಭೆಯಲ್ಲಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿದರು.
ಬಂಟ್ವಾಳ: ಕಲ್ಪವೃಕ್ಷ ತೆಂಗು ಉತ್ಪಾದಕರ ಫೆಡರೇಶನ್ ತೆಂಗು ಉತ್ಪಾದಕರ ಫೆಡರೇಶನ್ ಹಾಗೂ ದ.ಕ. ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ರೈತರಿಗೆ ಮಾಹಿತಿ ಮತ್ತು ಸಭೆ ಮೇಲ್ಕಾರಿನ ಬಿರ್ವ ಸೆಂಟರ್ ನಲ್ಲಿ ನಡೆಯಿತು.
ಕಲ್ಪವೃಕ್ಷ ತೆಂಗು ಉತ್ಪಾದಕರ ಫೆಡರೇಶನ್ ತೆಂಗು ಉತ್ಪಾದಕರ ಫೆಡರೇಶನ್ ಹಾಗೂ ದ.ಕ. ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ರೈತರಿಗೆ ಮಾಹಿತಿ ಮತ್ತು ಸಭೆಯಲ್ಲಿ ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಮಾತನಾಡಿದರು.
ತಾಪಂ ಅಧ್ಯಕ್ಷ ಚಂದ್ರಹಾಸ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ತೋಟಗಾರಿಕಾ ಇಲಾಖಾ ಉಪನಿರ್ದೇಶಕ ಎಚ್.ಆರ್.ಯೋಗೀಶ್, ಪ್ರಭಾರ ಸಹಾಯ ಕೃಷಿ ನಿರ್ದೇಶಕ ದಿನೇಶ್, ಮಂಗಳೂರು ಕೃಷಿ ವಿಧಾನ ತೋಟಗಾರಿಕಾ ವಿಜ್ಞಾನಿ ರವೀಂದ್ರ ಎಸ್ ಪಾಟೀಲ್ ರೈತರಿಗೆ ಮಾಹಿತಿ ನೀಡಿದರು. ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರಾರವರನ್ನು ಫೆಡರೇಶನ್ ವತಿಯಿಂದ ಸನ್ಮಾನಿಸಲಾಯಿತು.
ತಾ.ಪಂ.ಸದಸ್ಯ ಸಂಜೀವ ಪೂಜಾರಿ, ಪದ್ಮನಾಭ ಭಟ್ ಎಂ., ಯೂಸುಫ್ ಕರಂದಾಡಿ, ಸೀತಾರಾಮ ಶೆಟ್ಟಿ ಪಜೀರು ಉಪಸ್ಥಿತರಿದ್ದರು. ಫೆಡರೇಶನ್ ಅಧ್ಯಕ್ಷ ಎಸ್.ಅಬ್ಬಾಸ್ ಸ್ವಾಗತಿಸಿದರು. ಎಂ.ಸುಬ್ರಹ್ಮಣ್ಯ ಭಟ್ ವರದಿ ವಾಚಿಸಿದರು. ಪದ್ಮನಾಭ ನರಿಂಗಾಣ ವಂದಿಸಿ, ಎಂ.ವೆಂಕ್ರಮಣ ಭಟ್ ಕಾರ್ಯಕ್ರಮ ನಿರೂಪಿಸಿದರು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…