ಬಂಟ್ವಾಳ: ತೀವ್ರ ಕುತೂಹಲ ಕೆರಳಿಸಿದ್ದ ಬಂಟ್ವಾಳ ಎಪಿಎಂಸಿ ಚುನಾವಣೆಯನ್ನು ಮುಂದೂಡಲಾಗಿದೆ.
ಇದಷ್ಟೆ ಅಲ್ಲ, ರಾಜ್ಯದ 139 ಕೃಷಿಯುತ್ಪನ್ನ ಮತ್ತು ಮಾರುಕಟ್ಟೆ ಸಮಿತಿಗಳಿಗೆ ನಡೆಯಬೇಕಾಗಿದ್ದ ಚುನಾವಣೆ ಮುಂದೂಡಲು ಸರಕಾರಕ್ಕೆ ಹೈಕೋರ್ಟ್ ಅನುಮತಿ ನೀಡಿದೆ.
ಹೀಗಾಗಿ ಈ ಮಾಸಾಂತ್ಯದೊಳಗೆ ರಾಜ್ಯಾದ್ಯಂತ ನಡೆಯಬೇಕಿದ್ದ ಎಲ್ಲ ಎಪಿಎಂಸಿ ಚುನಾವಣೆ ರದ್ದಾಗಿದೆ. ಡಿ.2ನೇ ವಾರದಿಂದ 2017 ಜನವರಿ 20ರೊಳಗೆ ಹೊಸ ವೇಳಾಪಟ್ಟಿಯು ಪ್ರಕಟಿಸಿ, ಚುನಾವಣೆ ನಡೆಸಲಾಗುವುದು. ಜನವರಿ 21ರೊಳಗೆ ನೂತನ ಸಮಿತಿ ಅಸ್ತಿತ್ವಕ್ಕೆ ತರಲಾಗುವುದು ಎಂದು ರಾಜ್ಯ ಸರಕಾರ ಹೈಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿದೆ.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)