ಬಂಟ್ವಾಳ: ಬಂಟ್ವಾಳ ತಾಲೂಕಿನ ಮೂವರು ಪ್ರತಿಭಾವಂತರು ವಿವಿಧ ಕ್ರೀಡಾಕೂಟಗಳಲ್ಲಿ ಸ್ಪರ್ಧಿಸಿ ಜಯಶಾಲಿಯಾಗಿರುತ್ತಾರೆ.
ತಾಲೂಕಿನ ವಿಟ್ಲ ಮೂಡ್ನೂರು ಗ್ರಾಮದ ಅಬೀರಿ ದಯಾನಂದ ಶೆಟ್ಟಿ ಮತ್ತು ಜ್ಯೋತಿ ಡಿ ಶೆಟ್ಟಿ ಯವರ ಮಕ್ಕಳಾದ ಭರತ್ ಡಿ ಶೆಟ್ಟಿ ಕಬಡ್ಡಿಯಲ್ಲಿ ಕರ್ನಾಟಕ ರಾಜ್ಯ ತಂಡಕ್ಕೆ ಆಯ್ಕೆಯಾಗಿ ರಾಷ್ಟ್ರಮಟ್ಟದಲ್ಲಿ ಪ್ರತಿನಿಧಿಸಿರುತ್ತಾನೆ ಮತ್ತು ಮಂಗಳೂರು ವಿಶ್ವ ವಿದ್ಯಾನಿಲಯದಿಂದ ದಕ್ಷಿಣ ವಲಯ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾನೆ.
ದೀಕ್ಷಿತ್ ಡಿ ಶೆಟ್ಟಿ ಶಟ್ಲ್ ಬ್ಯಾಡ್ಮಿಂಟನ್ ಮತ್ತು ವಾಲಿಬಾಲ್ ಪಂದ್ಯಾಟದಲ್ಲಿ ಸತತ ಆರು ಬಾರಿ ರಾಜ್ಯ ಮಟ್ಟದಲ್ಲಿ ಭಾಗವಹಿಸಿ. ಒಂದು ಬಾರಿ ರಾಷ್ಟ್ರ ಮಟ್ಟದಲ್ಲಿ ಕಂಚಿನ ಪದಕ ಪಡೆದಿರುತ್ತಾನೆ.
ಶ್ರೇಯ ಡಿ ಶೆಟ್ಟಿ ಶಟ್ಲ್ ಬ್ಯಾಡ್ಮಿಂಟನ್ ಮತ್ತು ಡಿಸ್ಕಸ್ ತ್ರೋ ನಲ್ಲಿ ಆರು ಬಾರಿ ರಾಜ್ಯ ಮಟ್ಟ ದಲ್ಲಿ ಭಾಗವಹಿಸಿ, ಮೂರುಬಾರಿ ರಾಷ್ಟ್ರ ಮಟ್ಟದಲ್ಲಿ ಸ್ಪರ್ದಿಸಿ ಒಂದು ಬಾರಿ ಬೆಳ್ಳಿ ಪದಕಗಳಿಸಿರುತ್ತಾರೆ.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…