ಬಂಟ್ವಾಳ

Bantwala: ಲೋಕ ಅದಾಲತ್: 12,400 ಪ್ರಕರಣ ಇತ್ಯರ್ಥ

: ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಬಂಟ್ವಾಳ ತಾಲೂಕಿನ ಬಿಸಿರೋಡು ನ್ಯಾಯಾಲಯ ಸಂಕೀರ್ಣದಲ್ಲಿ ಶನಿವಾರ  ನಡೆದ ರಾಷ್ಟ್ರೀಯ ಲೋಕ ಅದಾಲತ್‌ನಲ್ಲಿ ಒಟ್ಟು 12,400 ಪ್ರಕರಣಗಳು ಯಶಸ್ವಿಯಾಗಿ ಇತ್ಯರ್ಥಗೊಂಡಿವೆ, 2.42 ಕೋಟಿ ರೂ ಅಧಿಕ ಮೊತ್ತದ ವ್ಯಾಜ್ಯ ಪರಿಹಾರವಾಗಿದೆ.

ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಅಧ್ಯಕ್ಷ ಅನಿಲ್ ಪ್ರಕಾಶ್ ಎಂ.ಪಿ., ಪ್ರಧಾನ ಸಿವಿಲ್ ನ್ಯಾಯಾಧೀಶ ರಾಜೇಂದ್ರ ಪ್ರಸಾದ್ ಕೆ.ಎಸ್. ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸೌಂದರ್ಯ ಎಂ. ಅವರ ಮಾರ್ಗದರ್ಶನದಲ್ಲಿ ಈ ಅದಾಲತ್ ನಡೆಯಿತು. ಲೋಕ ಅದಾಲತ್‌ನಲ್ಲಿ ಒಟ್ಟು 2,42,56,420 ರೂ ಮೊತ್ತದ ವ್ಯಾಜ್ಯಗಳಿಗೆ ಸೌಹಾರ್ದಯುತ ತೆರೆ ಬಿದ್ದಿದೆ

VNR GOLD

ನ್ಯಾಯಾಲಯದಲ್ಲಿ ಪರಿಗಣಿಸಲಾದ ಒಟ್ಟು 13,223 ಪ್ರಕರಣಗಳ ಪೈಕಿ ಮೂರು ವಿಭಾಗಗಳಲ್ಲಿ ಸಾಧಿಸಿದ ಪ್ರಗತಿಯ ವಿವರ ಹೀಗಿದೆ:

ಜಾಹೀರಾತು
  • ಸಿವಿಲ್ ಪ್ರಕರಣಗಳು: ಕೈಗೆತ್ತಿಕೊಂಡ 90 ಪ್ರಕರಣಗಳ ಪೈಕಿ 47 ಇತ್ಯರ್ಥಗೊಂಡು, 49,37,035 ರೂ ಮೊತ್ತದ ಇತ್ಯರ್ಥ ದಾಖಲಾಗಿದೆ.
  • ಕ್ರಿಮಿನಲ್ ಪ್ರಕರಣಗಳು: ಪರಿಗಣಿಸಿದ 302 ಪ್ರಕರಣಗಳಲ್ಲಿ 194 ಇತ್ಯರ್ಥಗೊಂಡು, 27,18,356 ರೂ ದಂಡ/ಪರಿಹಾರ ಸಂಗ್ರಹವಾಗಿದೆ.
  • ದಾವಾ ಪೂರ್ವ (ಪ್ರೀ-ಲಿಟಿಗೇಶನ್) ಪ್ರಕರಣಗಳು: ವಿಚಾರಣೆಗೆ ಬಂದ 12,831 ಪ್ರಕರಣಗಳಲ್ಲಿ ಬೃಹತ್ ಪ್ರಮಾಣದ 12,159 ಪ್ರಕರಣಗಳು ಬಗೆಹರಿದಿದ್ದು, 1,66,01,029 ರೂ ಮೊತ್ತದಷ್ಟು ಇತ್ಯರ್ಥವಾಗಿದೆ.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts