ಹಿರಿಯ ಅದರ್ಶಗಳು ನಂದಾದೀಪ ಆಗಬೇಕು ಸಾಧಕರ ನೂರು ಹೆಜ್ಜೆಗಳಲ್ಲಿ ಒಂದು ಹೆಜ್ಜೆಯನ್ನಾದರೂ ಅನುಸರಿಸಿ ಸಾರ್ಥಕತೆ ಪಡೆಯೋಣ ಎಂದು ಪುತ್ತೂರು ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ ಕೆ. ಪ್ರಭಾಕರ ಭಟ್ ಕಲ್ಲಡ್ಕ ಹೇಳಿದರು
ಅವರು ಎ.11ರ ಶನಿವಾರ ಕಲ್ಲಡ್ಕ ಸಮೀಪದ ಜೀವೆ ನೀರಕೋಡಿಯಲ್ಲಿ ಇತ್ತೀಚೆಗೆ ನಿಧನರಾದ ಕಲ್ಲಡ್ಕ ಶ್ರೀರಾಮ ವಿದ್ಯಾ ಸಂಸ್ಥೆಯ ನಿವೃತ್ತ ಹಿಂದಿ ಶಿಕ್ಷಕ ಗೋವಿಂದ ಭಟ್ ಅವರಿಗೆ ನುಡಿನಮನ ಸಲ್ಲಿಸಿ ಮಾತನಾಡಿದರು.
ಸಂಘ ಪರಿವಾರದ ಹಿರಿಯ ಮುಖಂಡ ರಾಧಾಕೃಷ್ಣ ಅಡ್ಯಂತಾಯ, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ವಸಂತ ಮಾಧವ, ರಮೇಶ್ ಕಲ್ಲಡ್ಕ, ಮಹೇಶ್ ಭಟ್ ಕಜೆ ಮೊದಲಾದವರು ಮಾತನಾಡಿದರು. ಡಾ ಕಮಲಾ ಪ್ರಭಾಕರ ಭಟ್, ಸಂಘ ಪರಿವಾರದ ಪ್ರಮುಖರು, ಶ್ರೀರಾಮ ವಿದ್ಯಾಸಂಸ್ಥೆಯವರು, ದಿವಂಗತ ಗೋವಿಂದ ಭಟ್ ಅವರ ಒಡನಾಡಿಗಳು ,ಹಿತೈಷಿಗಳು, ಸಹೋದ್ಯೋಗಿಗಳು, ಬಂಧುಗಳು ,ಕುಟುಂಬದವರು ಉಪಸ್ಥಿತರಿದ್ದರು. ಶ್ರೇಯಸ್ ಕಲ್ಲಡ್ಕ ಸ್ವಾಗತಿಸಿದರು. ರಾಜೇಶ್ ಕಲ್ಲಡ್ಕ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು. ದಿವಂಗತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಬಳಿಕ ಸಹಭೋಜನ ನಡೆಯಿತು.