ಪದ್ಯಾಣ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶದ ಪ್ರಯುಕ್ತ ಭಜನಾ ನವೋತ್ಸವವನ್ನು ಇಂದು ಬೆಳಗ್ಗೆ ಶ್ರೀ ಬೇತ ಕೃಷ್ಣ ಭಟ್ಟರು ಉದ್ಘಾಟಿಸಿದರು. ಪ್ರತೀದಿನ ಬೆಳಿಗ್ಗೆ ವಿವಿಧ ಭಜನಾ ತಂಡಗಳು ಭಜನೆ ನಡೆಸಿ ಕೊಡಲಿದ್ದಾರೆ
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಪದ್ಯಾಣದಲ್ಲಿ ಸೋಮವಾರ ಮಾರ್ಚ್ 30ರಂದು ಬ್ರಹ್ಮಕಲಶೋತ್ಸವ ಕಾರ್ಯಕ್ರಮಗಳು ಆರಂಭಗೊಂಡಿದ್ದು, ಪದ್ಯಾಣ ಶ್ರೀ ಮಹಾಲಿಂಗೇಶ್ವರನ ಸನ್ನಿಧಿಗೆ ಹೇಗೆ ಹೋಗುವುದು ಎಂಬ ಕುರಿತು ಸಂದೇಹಗಳಿದ್ದರೆ ಇಲ್ಲಿದೆ ಮಾಹಿತಿ.
ಕಾಸರಗೋಡಿನಿಂದ : ಕಾಸರಗೋಡಿನಿಂದ (ಉಪ್ಪಳ, ಕೈಕಂಬ, ಪೈವಳಿಕೆ ಬಾಯಾರು, ಮುಗುಳಿ, ಬೇತ ಮಾರ್ಗ) ೪೬ ಕಿಲೋಮೀಟರ್ ದೂರದಲ್ಲಿದೆ.
ಮಂಗಳೂರಿನಿಂದ ಬರುವವರು: ಮಂಗಳೂರಿನಿಂದ 39 ಕಿಲೋಮೀಟರ್ (ಸ್ವಂತ ವಾಹನದಲ್ಲಿ ತೊಕ್ಕೊಟ್ಟು, ಮುಡಿಪು, ಆನೆಕಲ್ಲು, ಬೇಡಗುಡ್ಡೆ ಮಾರ್ಗದಲ್ಲಿ ಪ್ರಯಾಣ ಮಾಡಬಹುದು) ದೂರದಲ್ಲಿದೆ ಪದ್ಯಾಣ.
ವಿಟ್ಲದಿಂದ ಬರುವವರು: ವಿಟ್ಲದಿಂದ 18 ಕಿಲೋಮೀಟರ್ ದೂರ. (ಕನ್ಯಾನ, ಮಿತ್ತನಡ್ಕ ಮಾರ್ಗ) ಮಂಗಳೂರು ಬಿ.ಸಿ.ರೋಡ್ ಮಾರ್ಗವಾಗಿ ವಿಟ್ಲಕ್ಕೆ ಬಂದು ಪದ್ಯಾಣಕ್ಕೆ ಬರಲೂಬಹುದು. ಆದರೆ ಅದು ಸುತ್ತು ಬಳಸಿ ಬಂದಂತಾಗುತ್ತದೆ.
ಪುತ್ತೂರಿನಿಂದ ವಿಟ್ಲ ಮಾರ್ಗ: ಪುತ್ತೂರಿನಿಂದ ವಿಟ್ಲಕ್ಕೆ ಬಂದು ಅಲ್ಲಿಂದ ಪದ್ಯಾಣಕ್ಕೆ ಕನ್ಯಾನ, ಮಿತ್ತನಡ್ಕ ಮಾರ್ಗವಾಗಿ ಬರಬಹುದು. ಪುತ್ತೂರಿನಿಂದ (ವಿಟ್ಲ ಮಾರ್ಗ) ಬೆಳಗ್ಗೆ ೭.೧೫, ೮.೨೦ ಹಾಗೂ ವಿಟ್ಲದಿಂದ ಬೆಳಗ್ಗೆ ೭.೪೫, ೯.೧೦ ಹಾಗೂ ಸಂಜೆ ೬.೩೦ ಗಂಟೆಗೆ ಪದ್ಯಾಣಕ್ಕೆ ಕೆಎಸ್. ಆರ್.ಸಿ ಬಸ್ ಸೌಲಭ್ಯ ಇದೆ. ಉಳಿದಂತೆ ಮಿತ್ತನಡ್ಕಕ್ಕೆ ಬರುವ ಬಸ್ಗಳಿದ್ದು ಅಲ್ಲಿಂದ ಖಾಸಗಿ ವಾಹನ (ರಿಕ್ಷಾ)ಗಳ ಮೂಲಕ (೩ ಕಿಲೋಮೀಟರ್) ಪದ್ಯಾಣವನ್ನು ತಲುಪಬಹುದು. ವ್ಯವಸ್ಥೆ ದೃಷ್ಟಿಯಿಂದ ಬಸ್ಸುಗಳು ಸದ್ಯಕ್ಕೆ ಮಿತ್ತನಡ್ಕಕ್ಕೆ ಹೋಗುತ್ತಿವೆ.