ಬಂಟ್ವಾಳ: ಕೃಷಿ ವಿಶ್ವವಿದ್ಯಾಲಯ, ಜಿಕೆವಿಕೆ ಮಂಗಳೂರು, ರಾಷ್ಟ್ರೀಯ ವಿಸ್ತರಣಾ ನಿರ್ವಹಣಾ ಸಂಸ್ಥೆ, ಹೈದರಾಬಾದ್ ಮತ್ತು ಕೃಷಿ ಇಲಾಖೆ ದಕ್ಷಿಣ ಕನ್ನಡ ಆಯೋಜಿಸಿದ 2023-24ನೇ ಸಾಲಿನ ಯುವ ಉದ್ಯಮಿಗಳಿಗೆ ಕೃಷಿ ವಿಸ್ತರಣಾ ಸೇವೆಯಲ್ಲಿ ಒಂದು ವರ್ಷದ ಡಿಪ್ಲೋಮಾ (ಡಿಪ್ಲೋಮಾ ಇನ್ ಎಗ್ರಿಕಲ್ಚರಲ್ ಎಕ್ಸ್ ಟೆನ್ಶನ್ ಸರ್ವೀಸಸ್ ಫಾರ್ ಇನ್ ಪುಟ್ ಡೀಲರ್ಸ್ ) ವಿಷಯದಲ್ಲಿ ಬಿ.ಸಿ.ರೋಡ್ ನ ಸೌಮ್ಯಲಕ್ಷ್ಮೀ ಕೆ. ಅವರು ಬೆಳ್ಳಿ ಪದಕದೊಂದಿಗೆ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇವರು ಬಂಟ್ವಾಳ ಕೃಷಿ ಇಲಾಖೆಯ ತಾಂತ್ರಿಕ ಕೃಷಿ ಅಧಿಕಾರಿ ನಂದನ್ ಶೆಣೈ ಅವರ ಪತ್ನಿ.