ಬಂಟ್ವಾಳ

ಇನ್ನು ಎಷ್ಟು ಬಾರಿ ಭೂಮಿ ಕೊಡಿ ಎಂದು ಕೇಳಬೇಕು?: ಅಹವಾಲು ಸಭೆಯಲ್ಲಿ ಮುಖಂಡರ ಪ್ರಶ್ನೆ

ಬಂಟ್ವಾಳ: ನಾವು ಕೂಡ ಮನುಷ್ಯರಂತೆ ಬದುಕಬೇಕು ಎಂದಿದ್ದರೆ ಭೂಮಿ ಬೇಕು. ನಮಗೆ ಭೂಮಿ ಮೊದಲು, ಅದಿಲ್ಲದಿದ್ದರೆ, ಏನೂ ಬೇಡ. ಕೊಡಲು ಆಗುವುದಿಲ್ಲ ಎಂದರೆ ಇಲ್ಲ ಎಂದು ಹೇಳಿ.. ಸುಮ್ಮನೇ ಭೂಮಿ ಕೊಡುತ್ತೇವೆ ಎಂದು ಪ್ರತಿ ಸಭೆಗಳಲ್ಲೂ ಹೇಳುವುದು ಯಾಕೆ?

ಬಂಟ್ವಾಳ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ಕೊರಗ ಸಮುದಾಯದ ಕುಂದುಕೊರತೆ ಅಹವಾಲು ಸ್ವೀಕಾರ ಸಭೆಯಲ್ಲಿ ಮುಖಂಡ ಸುಂದರ ಬೆಳುವಾಯಿ ಆಡಿದ ನೋವಿನ ಮಾತಿದು.

ಜಾಹೀರಾತು

ಸರಕಾರದ ಸೌಲಭ್ಯ, ಸೌಕರ್ಯ ಪಡೆಯಬೇಕು ಎಂದಿದ್ದರೆ ಭೂಮಿ ಬೇಕು. ಭೂಮಿಯೇ ಇಲ್ಲದಿದ್ದರೆ ಏನು ಕೊಟ್ಟರೆ ಏನು ಪ್ರಯೋಜನ ಎಂದು ಹೇಳಿದ ಅವರು, ಜನಪ್ರತಿನಿಧಿಗಳೂ ಈ ಕುರಿತು ಅಧಿವೇಶನದಲ್ಲಿ ಮಾತನಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ವೀರಕಂಭ ಗ್ರಾಮದಲ್ಲಿ ನಡೆದ ತಾಲೂಕು ಮಟ್ಟದ ಸಭೆಯ ಫಲಿತಾಂಶಗಳೇನು ಎಂದು ಪ್ರಶ್ನಿಸಿದ ಅವರು ಎಷ್ಟು ಮಂದಿಗೆ ಹಕ್ಕುಪತ್ರ ದೊರಕಿದೆ ಎಂದು ಪ್ರಶ್ನಿಸಿದರು.  ಗ್ರಾಮದ ಮೂಲ ಮಂಜೂರುದಾರರಿಗೆ ಆರ್.ಟಿ.ಸಿ.ಆಗಿದೆ ಎಂದು ಕಂದಾಯ ಅಧಿಕಾರಿ ದಿವಾಕರ ಮುಗುಳ್ಯ ತಿಳಿಸಿದಾಗ, ಉಳಿದವರಿಗೆ ಏಕಿಲ್ಲ ಎಂದು ಪ್ರಶ್ನಿಸಿದ ಅವರು, ಅಧಿಕಾರಿಗಳೇ ಜನರ ಬಳಿಗೆ ಹೋಗದಿದ್ದರೆ, ಯಾವುದೇ ಸಭೆ ನಡೆಸಿ ಪ್ರಯೋಜನವಿಲ್ಲ ಎಂದರು.

ಈ ಸಂದರ್ಭ ತಾಪಂ ಇಒ ಸಚಿನ್ ಕುಮಾರ್ ಅವರೂ ಅನುಮೋದಿಸಿ, ವಿಟ್ಲದಲ್ಲಿ ಜನವರಿ 15ರೊಳಗೆ ಸುತ್ತಮುತ್ತಲಿನ ಗ್ರಾಮಗಳ ಸಮುದಾಯದವರ ಸಭೆಯನ್ನು ಕರೆಯಲಾಗುವುದು ಎಂದರು, ವಿವಿಧ ವಿಚಾರಗಳ ಕುರಿತು ಚರ್ಚೆ ನಡೆಯಿತು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖಾಧಿಕಾರಿ ವಿನಯ ಕುಮಾರಿ ಉಪಸ್ಥಿತರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.