ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ನ ಕಲ್ಲಡ್ಕ ವಲಯ ಶೌರ್ಯ ವಿಪತ್ತು ನಿರ್ವಹಣಾ ಸಮಿತಿ, ಬಾಳ್ತಿಲ ಮತ್ತು ಗೋಳ್ತಮಜಲು ಗ್ರಾಮ ಪಂಚಾಯತ್ ಬಾಳ್ತಿಲ, ಶ್ರೀ ಶಾರದಾ ಸೇವಾ ಪ್ರತಿಷ್ಠಾನ ಕಲ್ಲಡ್ಕ, ಹಸಿರು ಸೇವಾದಳ ಮಂಗಳೂರು ಜಂಟಿ ಆಶ್ರಯದಲ್ಲಿ ಸ್ಥಳೀಯ ಸಂಘಟನೆಗಳ ಸಹಕಾರದೊಂದಿಗೆ ಕಲ್ಲಡ್ಕ ಪೇಟೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭ ವಿವಿಧ ಪ್ರಮುಖರಾದ ಪ್ರೇಮಾ, ಚಂದ್ರಶೇಖರ್ ಪೂಜಾರಿ ಚೆಂಡೆ, ಯತಿನ್ ಏಳ್ತಿಮಾರ್, ವಜ್ರನಾಥ್, ಸುನಿಲ್ ಕುಮಾರ್, ಸುಖರಾಜ್, ವಿದ್ಯಾ, ಲತೀಶ್, ಮಾಧವ ಸಾಲಿಯಾನ ಮಣಿಕಂಠ ಯುವಶಕ್ತಿ ಸದಸ್ಯರು ಆಶೀರ್ವಾದ ಸಂಜೀವಿನಿ ತಂಡ ಸದಸ್ಯರು ಪಾಲ್ಗೊಂಡಿದ್ದರು