ಬಂಟ್ವಾಳ

Bantwal: ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ

ತಾಪಂ ಆಡಳಿತಾಧಿಕಾರಿ ಎಚ್. ಶಶಿಧರ್ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯಿತಿ ಸಾಮಾನ್ಯ ಸಭೆ ನಡೆಯಿತು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಸಚಿನ್ ಕುಮಾರ್ ಪೂರಕ ಮಾಹಿತಿ ನೀಡಿದರು‌

ಜಾಹೀರಾತು

ಬಂಟ್ವಾಳದಲ್ಲಿ ೨೦ ಕಾರ್ಯಕರ್ತೆಯರ ಹುದ್ದೆ ಖಾಲಿ ಇದೆ ಎಂದು ಸಿಡಿಪಿಒ ಮಮ್ತಾಜ್   ಆರು ಅಂಗನವಾಡಿಗಳಿಗೆ ಕಟ್ಟಡವಿಲ್ಲ. ತಹಶೀಲ್ದಾರ್ ಅವರೇ ನಿವೇಶನ ಇಲ್ಲ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ದಾನಿಗಳ ನೆರವನ್ನು ಕೇಳಿದ್ದೇವೆ ಎಂದು ಮಾಹಿತಿ ನೀಡಿದರು. ಶಾಲೆಗಳಲ್ಲಿ ಅಂಗನವಾಡಿಗೆ ಅವಕಾಶ ನೀಡಲು ಕಳೆದ ಸಭೆಯಲ್ಲಿ ಸೂಚನೆ ನೀಡಿದ್ದರು. ಅದರಂತೆ ನಡೆಸಲು ಇಒ ಸಚಿನ್ ಕುಮಾರ್ ತಿಳಿಸಿದರು.

ಪಶುವೈದ್ಯಕೀಯ ಇಲಾಖಾ ತಾಲೂಕು ವೈದಾಧಿಕಾರಿ ಡಾ. ಉಮೇಶ್ ಕಿರಣ್ ಮಾಹಿತಿ ನೀಡಿ ಬೀದಿನಾಯಿಗಳ ಸಂರಕ್ಷಣೆ ಕುರಿತು ಮಾರ್ಗಸೂಚಿಗಳನ್ನು ಅನುಸರಿಸಬೇಕಾದ ವಿಧಾನ ಹಾಗೂ ಸರಕಾರದ ನಿರ್ದೇಶನಗಳ ಕುರಿತು ವಿವರಿಸಿದರು.

ತಾಪಂ ಅಧೀನದಲ್ಲಿ ಹದಿನಾಲ್ಕು ಬಾಡಿಗೆ ಕಟ್ಟಡ ಇದೆ. ಇದರಲ್ಲಿ ಎರಡು ಖಾಲಿ ಇದೆ. ಹನ್ಬೆರಡರಲ್ಲಿ ಬಾಡಿಗೆಯವರು ಇದ್ದಾರೆ. ಬಾಡಿಗೆ ಬಾಕಿ ಇದ್ದವರಿಗೆ ಎರಡು ಬಾರಿ ನೋಟಿಸ್ ಕೊಟ್ಟಿದ್ದು, ಎಂಟು ಅಂಗಡಿಯವರು ಬಾಡಿಗೆ ಪಾವತಿ ಮಾಡಿದ್ದಾರೆ. ನಾಲ್ಕು ಅಂಗಡಿಯವರು ಪಾವತಿ ಮಾಡಿಲ್ಲ ಎಂದು ಇಒ ಹೇಳಿದರು. ಮೂರನೇ ನೋಟಿಸ್ ಗೂ ಸ್ಪಂದಿಸದೇ ಇದ್ದರೆ ಕಾನೂನು ಕ್ರಮ ಕೈಗೊಳ್ಳುವಂತೆ ಆಡಳಿತಾಧಿಕಾರಿ ಸೂಚಿಸಿದರು.

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೆಲಸ ಸಂದರ್ಭ ದೂರುಗಳು ಬರುತ್ತಿರುವ ಬಗ್ಗೆ ಸಚಿನ್ ಕುಮಾರ್ ಪ್ರಶ್ನಿಸಿ, ಸಾರ್ವಜನಿಕರಿಗೆ ತೊಂದರೆಯಾಗದಂತೆ ಗಮನ ಹರಿಸಲು ಸೂಚಿಸಿದರು. ಜನವರಿ ಮೊದಲ ವಾರದೊಳಗೆ ಎಲ್ಲ ಕೆಲಸಗಳಿಗೂ ಅನುಮೋದನೆ ಪಡೆದುಕೊಳ್ಳಬೇಕು. ಖರೀದಿಗಳನ್ನು ಸಾಮಾನ್ಯ ಸಭೆಯಲ್ಲಿ ಕಡ್ಡಾಯ ಅನುಮೋದನೆ ಆದ ಮೇಲೆ ಮಾಡಬೇಕು ಎಂದು ಇಒ ಸೂಚಿಸಿದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.