ಬಂಟ್ವಾಳ

ಪ್ರತಿಭಾ ಕಾರಂಜಿ: ಕಡೇಶಿವಾಲಯ ಸರಕಾರಿ ಶಾಲೆಗೆ ಸಮಗ್ರ ಪ್ರಶಸ್ತಿ

ಗಡಿಯಾರ ಶಾಲೆಯಲ್ಲಿ ನಡೆದ ಕಡೇಶಿವಾಲಯ ಮತ್ತು ಕೆದಿಲ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಕಡೇಶಿವಾಲಯ ಪ್ರಾಥಮಿಕ ಶಾಲೆ ಕ್ಲಸ್ಟರ್ ಮಟ್ಟದ ಸ್ಪರ್ಧೆಯಲ್ಲಿ ಸಮಗ್ರ ಪ್ರಶಸ್ತಿ ಪಡೆದಿದೆ.

ಜಾಹೀರಾತು

ಕನ್ನಡ ಕಂಠಪಾಠದಲ್ಲಿ ಯಶಿಕಾ ಪ್ರಥಮ, ದೇಶಭಕ್ತಿ ಗೀತೆ ಮತ್ತು ಭಕ್ತಿ ಗೀತೆಯಲ್ಲಿ ನಿಧಿ ಎಸ್. ಪ್ರಥಮ, ಸಂಸ್ಕೃತ ಪಠಣದಲ್ಲಿ ದಿಶಾನಿ ಪ್ರಥಮ, ಛದ್ಮವೇಷದಲ್ಲಿ ಶ್ರಾವಣ್ಯ ಎಸ್ ನಾಯ್ಕ ಪ್ರಥಮ, ಕಥೆ ಹೇಳುವುದು ಮತ್ತು ಅಭಿನಯ ಗೀತೆಯಲ್ಲಿ ಆರಾಧ್ಯ ಜಿ ಪ್ರಥಮ, ಚಿತ್ರಕಲೆಯಲ್ಲಿ ಯಶ್ವಿನ್ ಪ್ರಥಮ, ದೇಶಭಕ್ತಿ ಗೀತೆ ಮತ್ತು ಭಕ್ತಿ ಗೀತೆಯಲ್ಲಿ ಧನ್ವಿತ್ ಪ್ರಥಮ, ಪ್ರಬಂಧ ರಚನೆಯಲ್ಲಿ ಸಾನ್ವಿ ಪ್ರಥಮ, ಕಥೆ ಹೇಳುವುದದಲ್ಲಿ ತನುಶ್ರೀ ಪ್ರಥಮ, ಅಭಿನಯ ಗೀತೆಯಲ್ಲಿ ಚಿನ್ಮಯಿ ಬಿ ಪ್ರಥಮ, ಆಶುಭಾಷಣದಲ್ಲಿ ಕುಶಿತ್ ಪ್ರಥಮ ಸ್ಥಾನ ಗಳಿಸಿದ್ದಾರೆ.

ಫಾತಿಮಾ ಶಹದಿಯ ಇಂಗ್ಲಿಷ್ ಕಂಠಪಾಠ ದ್ವಿತೀಯ,  ಧ್ರುವ ಚರಣ್ ಮಿಮಿಕ್ರಿ ದ್ವಿತೀಯ, ಹಾರ್ದಿಕ್ ಕ್ಲೇ ಮಾಡಲಿಂಗ್ ತೃತೀಯ, ಶ್ರಾವಣ್ಯ ಎಸ್ ನಾಯ್ಕ ಆಶುಭಾಷಣ ತೃತೀಯ, ತನುಶ್ರೀ ಇಂಗ್ಲಿಷ್ ಕಂಠಪಾಠ ತೃತೀಯ, ದಿವ್ಯ ಸಂಸ್ಕೃತ  ಪಠಣ ತೃತೀಯ, ಸಲೀಮ್ ಅರೇಬಿಕ್ ಪಠಣ ತೃತೀಯ, ವೈಶಾಖ ಕ್ಲೇ ಮಾಡಲಿಂಗ್ ತೃತೀಯ,  ಚಿನ್ಮಯಿ ಕವನ ವಾಚನ ತೃತೀಯ ಸ್ಥಾನ ಪಡೆದು ಶಾಲೆಗೆ ಸಮಗ್ರ ಪ್ರಶಸ್ತಿ ದೊರಕಿದೆ. ಮಕ್ಕಳನ್ನು ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕ ವೃಂದದ ಪರವಾಗಿ ಅಭಿನಂದಿಸಲಾಯಿತು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.