ಬಂಟ್ವಾಳ

ಸೂರಿಕುಮೇರು ಚರ್ಚ್‌ನಲ್ಲಿ ಭ್ರಾತೃತ್ವದ ಭಾನುವಾರ ಆಚರಣೆ

ಸೂರಿಕುಮೇರು ಸೈಂಟ್ ಜೋಸೆಫ್ ಚರ್ಚ್‌ನಲ್ಲಿ ಇಂದು ನವಂಬರ್ 9ರಂದು ಭಾತೃತ್ವದ ಭಾನುವಾರವನ್ನು ಭಕ್ತಿಭಾವದಿಂದ ಆಚರಿಸಲಾಯಿತು.

ಜಾಹೀರಾತು

ಈ ಸಂದರ್ಭ ಮಂಗಳೂರು ಧರ್ಮಕ್ಷೇತ್ರದ ಎಸ್ಟೇಟ್ ಮ್ಯಾನೇಜರ್ ವಂದನೀಯ ಫಾದರ್ ಮ್ಯಾಕ್ಸಿಂ ರುಜಾರಿಯೊ ಅವರು ಪ್ರದಾನ ಧರ್ಮಗುರುಗಳಾಗಿ ಆಗಮಿಸಿ ದಿವ್ಯ ಬಲಿಪೂಜೆಯ ನೇತೃತ್ವವನ್ನು ವಹಿಸಿದ್ದರು.

ಭಕ್ತರಿಗೆ ಆಶೀರ್ವಚನ ನೀಡಿ ಮಾತನಾಡಿದ ಅವರು, “ಭರವಸೆಯ ಯಾತ್ರಿಕರಾಗಿ ಪರಮ ಪ್ರಸಾದದ ಸುತ್ತ ಧರ್ಮಕೇಂದ್ರವನ್ನು ಒಂದು ಕುಟುಂಬವನ್ನಾಗಿ ರೂಪಿಸೋಣ. ಪ್ರತಿಯೊಬ್ಬರೂ ಅನ್ಯೋನ್ಯತೆಯಿಂದ ಬಾಳಿ ಕ್ರಿಸ್ತನಿಗೆ ಸಾಕ್ಷಿಯಾಗಿ ಪರರ ಜೀವನದಲ್ಲಿ ಬೆಳಕಾಗಿ ಬದುಕಬೇಕು. ಇತ್ತೀಚೆಗೆ ನೀವು ಕೇರಳದ ಒಂದು ಚರ್ಚ್ ನಲ್ಲಿ ನಡೆದ ಒಂದು ಪವಾಡದ ಕುರಿತು ಕೇಳಿರಬಹುದು. ವಿಶ್ವಾಸದಿಂದ ಪ್ರಾರ್ಥಿಸಿದರೆ ಅದೇ ಪವಾಡವು ಈ ಸೂರಿಕುಮೇರು ಚರ್ಚ್ ನಲ್ಲಿಯೂ ನಡೆಯುತ್ತದೆ ಎಂದು ಭಕ್ತರಿಗೂ ವಿಶ್ವಾಸದಿಂದ ಪ್ರಾರ್ಥಿಸಲು ಕರೆ ನೀಡಿದರು.

ದಿವ್ಯ ಬಲಿಪೂಜೆಯಲ್ಲಿ ವಂದನೀಯ ಫಾದರ್ ವಿಕ್ಟರ್ ಡಯಾಸ್ ಸಹಭಾಗಿಯಾಗಿದ್ದರು. ಬಲಿಪೂಜೆಯ ನಂತರ ಪರಮ ಪ್ರಸಾದದ ಭವ್ಯ ಮೆರವಣಿಗೆಯು ಸೂರಿಕುಮೇರು ಚರ್ಚ್‌ನಿಂದ ಸೂರಿಕುಮೇರು ಜಂಕ್ಷನ್ ತನಕ ಸಾಗಿತು.

ಪರಮಪ್ರಸಾದದ ಆಶೀರ್ವಚನದ ಬಳಿಕ ಭಾತೃತ್ವದ ಭಾನುವಾರ ಆಚರಣೆಗೆ ಸಹಕರಿಸಿದ ಜೋನ್ ಪಿರೇರಾ, ಪ್ರೀತಿ ಲ್ಯಾನ್ಸಿ ಪಿರೇರಾ, ರೀಟಾ ಸುವಾರಿಸ್, ರೋಷನ್ ಬ್ಲ್ಯಾನಿ ಡಿಸೋಜ ಹಾಗೂ ಇತರ ದಾನಿಗಳನ್ನು ಫಾದರ್ ಮ್ಯಾಕ್ಸಿಂ ರುಜಾರಿಯೊರವರು ಶಾಲು ಹೊದಿಸಿ ಸನ್ಮಾನಿಸಿದರು.

ಈ ಸಂದರ್ಭ ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಸ್ಟೀವನ್ ಪ್ರಕಾಶ್ ಮಾರ್ಟಿಸ್, ಕಾರ್ಯದರ್ಶಿ ಸ್ಟೀವನ್ ಆಲ್ವಿನ್ ಪಾಯ್ಸ್, ಆಯೋಗಗಳ ಸಂಯೋಜಕ ಹಾಗೂ ಕಥೊಲಿಕ್ ಸಭಾ ಸೂರಿಕುಮೇರು ಘಟಕದ ಅಧ್ಯಕ್ಷ ಎಲಿಯಾಸ್ ಪಿರೇರಾ, ನಿಕಟ ಪೂರ್ವ ಅಧ್ಯಕ್ಷ ತೊಮಸ್ ಲಸ್ರಾದೊ, ವಾರ್ಡ್ ಗುರಿಕಾರರಾದ ಮೇರಿ ಡಿಸೋಜ, ಐರಿನ್ ಡಿಸೋಜ, ಪ್ರೀತಿ ಸುವಾರಿಸ್, ರೆಮಿ ಡಿಸೋಜ, ಮೈಕಲ್ ಎಂ. ಉಪಸ್ಥಿತರಿದ್ದರು. ವೆಲಂಕಣಿ ವಾರ್ಡ್‌ನ ಬ್ರಿಯಾನ್ ಮತ್ತು ಕ್ಲ್ಯಾರಾ ಪಿರೇರಾ ದಂಪತಿ ಉಪಹಾರದ ವ್ಯವಸ್ಥೆ ಮಾಡಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.