ಕಲ್ಲಡ್ಕದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ನಿಂದ ರಜತ ಕಲಾಯಾನ ಕಾರ್ಯಕ್ರಮಗಳು ನಡೆಯಲಿದ್ದು, ಆರಂಭಿಕ ಕಾರ್ಯಕ್ರಮವಾಗಿ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಅಕ್ಟೋಬರ್ 26ರಂದು ಸಂಜೆ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ನಿರ್ದೇಶಕಿ ವಿದುಷಿ ವಿದ್ಯಾ ಮನೋಜ್ ತಿಳಿಸಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2001ರ ಅಕ್ಟೋಬರ್ 26ರಂದು ಸಂಸ್ಥೆಯಿಂದ ಬೆಳ್ತಂಗಡಿಯಲ್ಲಿ ಭರತನಾಟ್ಯ ತರಬೇತಿ ಆರಂಭಗೊಂಡಿತ್ತು. ಇದೀಗ ಕಲ್ಲಡ್ಕ ಹಾಗೂ ಬಿ.ಸಿ.ರೋಡ್ ನಲ್ಲಿ ಶಾಖೆಗಳಿದ್ದು, ಈವರೆಗೆ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. 23 ಮಂದಿ ವಿದ್ವತ್ ಪದವಿ ಗಳಿಸಿದ್ದು, ವಿಶ್ವದ ನಾನಾ ಕಡೆಗಳಲ್ಲಿ ಉದ್ಯೋಗಗಳನ್ನು ನಿರ್ವಹಿಸಿಕೊಂಡಿದ್ದಾರೆ. ಇವರಲ್ಲಿ 20 ಮಂದಿ ಅ.26ರಂದು ಪ್ರದರ್ಶನ ನೀಡಲಿದ್ದಾರೆ. ರಜತ ಕಲಾಯಾನ ಶೀರ್ಷಿಕೆಯೊಂದಿಗೆ ನಡೆಯುವ 25ರ ಸಂಭ್ರಮದಲ್ಲಿ 20 ಮಂದಿ ವಿದ್ವತ್ ಪಡೆದ ಕಲಾವಿದರು ಭರತನಾಟ್ಯ ಮಾರ್ಗಂ ಎಂಬ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ರಜತ ಸಂಭ್ರಮ ಹಿನ್ನೆಲೆ ವರ್ಷವಿಡೀ ಹಲವು ಕಾರ್ಯಕ್ರಮ, ಕಾರ್ಯಾಗಾರಗಳನ್ನು ನಡೆಸಿಕೊಡಲಾಗುವುದು ಎಂದರು.ಚಕ್ರಪಾಣಿ ನೃತ್ಯಕಲಾಕೇಂದ್ರದ ನಿರ್ದೇಶಕ ಸುರೇಶ್ ಅತ್ತಾವರ, ಚಿತ್ರನಿರ್ದೇಶಕ ಸ್ಮಿತೇಶ್ ಎಸ್. ಬಾರ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎಂದವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಡಾ. ಮನೋಜ್ ಕಲ್ಲಡ್ಕ, ಪೋಷಕರಾದ ಲಕ್ಷ್ಮಣ ಅಗ್ರಬೈಲ್, ತಿರುಮಲೇಶ್ವರ ಭಟ್ ಕಲ್ಲಡ್ಕ, ಆಶಾ ರೈ ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.