ಬಂಟ್ವಾಳ

ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ನಿಂದ ರಜತ ಕಲಾಯಾನ

ಕಲ್ಲಡ್ಕದ ಕಲಾನಿಕೇತನ ಡ್ಯಾನ್ಸ್ ಫೌಂಡೇಶನ್ ನಿಂದ ರಜತ ಕಲಾಯಾನ ಕಾರ್ಯಕ್ರಮಗಳು ನಡೆಯಲಿದ್ದು, ಆರಂಭಿಕ ಕಾರ್ಯಕ್ರಮವಾಗಿ ಬಂಟ್ವಾಳದ ಸ್ಪರ್ಶ ಕಲಾ ಮಂದಿರದಲ್ಲಿ ಅಕ್ಟೋಬರ್ 26ರಂದು ಸಂಜೆ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ನಿರ್ದೇಶಕಿ ವಿದುಷಿ ವಿದ್ಯಾ ಮನೋಜ್ ತಿಳಿಸಿದ್ದಾರೆ.

ಜಾಹೀರಾತು

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2001ರ ಅಕ್ಟೋಬರ್ 26ರಂದು ಸಂಸ್ಥೆಯಿಂದ ಬೆಳ್ತಂಗಡಿಯಲ್ಲಿ ಭರತನಾಟ್ಯ ತರಬೇತಿ ಆರಂಭಗೊಂಡಿತ್ತು. ಇದೀಗ ಕಲ್ಲಡ್ಕ ಹಾಗೂ ಬಿ.ಸಿ.ರೋಡ್ ನಲ್ಲಿ ಶಾಖೆಗಳಿದ್ದು, ಈವರೆಗೆ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳು ತರಬೇತಿ ಪಡೆದಿದ್ದಾರೆ. 23 ಮಂದಿ ವಿದ್ವತ್ ಪದವಿ ಗಳಿಸಿದ್ದು, ವಿಶ್ವದ ನಾನಾ ಕಡೆಗಳಲ್ಲಿ ಉದ್ಯೋಗಗಳನ್ನು ನಿರ್ವಹಿಸಿಕೊಂಡಿದ್ದಾರೆ. ಇವರಲ್ಲಿ 20 ಮಂದಿ ಅ.26ರಂದು ಪ್ರದರ್ಶನ ನೀಡಲಿದ್ದಾರೆ. ರಜತ ಕಲಾಯಾನ ಶೀರ್ಷಿಕೆಯೊಂದಿಗೆ ನಡೆಯುವ 25ರ ಸಂಭ್ರಮದಲ್ಲಿ 20 ಮಂದಿ ವಿದ್ವತ್ ಪಡೆದ ಕಲಾವಿದರು ಭರತನಾಟ್ಯ ಮಾರ್ಗಂ ಎಂಬ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ. ರಜತ ಸಂಭ್ರಮ ಹಿನ್ನೆಲೆ ವರ್ಷವಿಡೀ ಹಲವು ಕಾರ್ಯಕ್ರಮ, ಕಾರ್ಯಾಗಾರಗಳನ್ನು ನಡೆಸಿಕೊಡಲಾಗುವುದು ಎಂದರು.ಚಕ್ರಪಾಣಿ ನೃತ್ಯಕಲಾಕೇಂದ್ರದ ನಿರ್ದೇಶಕ ಸುರೇಶ್ ಅತ್ತಾವರ, ಚಿತ್ರನಿರ್ದೇಶಕ ಸ್ಮಿತೇಶ್ ಎಸ್. ಬಾರ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಎಂದವರು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಡಾ. ಮನೋಜ್ ಕಲ್ಲಡ್ಕ, ಪೋಷಕರಾದ ಲಕ್ಷ್ಮಣ ಅಗ್ರಬೈಲ್, ತಿರುಮಲೇಶ್ವರ ಭಟ್ ಕಲ್ಲಡ್ಕ, ಆಶಾ  ರೈ ಉಪಸ್ಥಿತರಿದ್ದು ಪೂರಕ ಮಾಹಿತಿ ನೀಡಿದರು.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.