ಪ್ರಮುಖ ಸುದ್ದಿಗಳು

ಡೀಲರ್ ಶಿಪ್ ಕೊಡಿಸುತ್ತೇವೆ ಎಂದು ನಂಬಿಸಿ 17.6 ಲಕ್ಷ ರೂ ವಂಚನೆ: ಸೆನ್ ಠಾಣೆಗೆ ದೂರು

ಇಫ್ಕೋ ಕಂಪನಿಯ ಡೀಲರ್ ಶಿಪ್ ನೀಡುತ್ತೇವೆ ಎಂದು ನೀಲೇಶ್ ಮಿಶ್ರಾ ಎಂಬ ಹೆಸರಲ್ಲಿ ಬಂಟ್ವಾಳದ ಇಂಜಿನಿಯರಿಂಗ್ ಮುಗಿಸಿ ಮನೆಯಲ್ಲಿರುವ ಯುವಕರೊಬ್ಬರಿಗೆ ಕರೆ ಮಾಡಿದ ವ್ಯಕ್ತಿ, ಸಂತ್ರಸ್ತರನ್ನು ನಂಬಿಸಿ, 17,60,810 ರೂ ವಂಚಿಸಿದ್ದಾಗಿ ಮಂಗಳೂರಿನ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

ಜಾಹೀರಾತು

ಇಂಜಿನಿಯರಿಂಗ್‌  ಮುಗಿಸಿ ಪ್ರಸ್ತುತ ಮನೆಯಲ್ಲಿಯೇ ಇರುವ ಅವರಿಗೆ ಜುಲೈ 4ರಂದು ಮೊಬೈಲ್‌ಗೆ ಅಪರಿಚಿತ ವ್ಯಕ್ತಿ ಕರೆ ಮಾಡಿ ತಾನು ಇಫ್ಕೊ ಕಂಪನಿಯ ರಿಲೇಶನ್ ಶಿಪ್ ಮ್ಯಾನೇಜರ್ ನೀಲೇಶ್ ಮಿಶ್ರಾ ಎಂದು ಪರಿಚಯಿಸಿಕೊಂಡಿದ್ದು, ಇಫ್ಕೋ ಕಂಪನಿಯ ಡೀಲರ್ ಶಿಪ್ ನೀಡುತ್ತೇವೆ ಎಂದು ಹೇಳಿದ್ದು, ಅದಕ್ಕೆ ದೂರುದಾರರು ಒಪ್ಪಿಕೊಂಡಿದ್ದಾರೆ. ಬಳಿಕ ದೂರುದಾರರ ಇ-ಮೇಲ್‌ ಗೆ ಸಂಬಂಧಪಟ್ಟ ಅಪ್ಲಿಕೇಶನ್ ಫಾರ್ಮ್  ಕಳುಹಿಸಿದ್ದು ಅದನ್ನು ಭರ್ತಿ ಮಾಡಿ ಅವರು ತಿಳಿಸಿದಂತೆ ಪಾನ್‌ ಕಾರ್ಡ್‌, ಬ್ಯಾಂಕ್‌ ವಿವರ  ಹಾಗೂ  ವೈಯಕ್ತಿಕ  ದಾಖಲಾತಿಗಳನ್ನು ಕಳುಹಿಸಿದ್ದಾರೆ. ನಂತರ ರಿಜಿಸ್ಟ್ರೇಶನ್ ಮೊತ್ತವೆಂದು ರೂ.35,000 ಹಣ ಕಳುಹಿಸಲು ತಿಳಿಸಿದ್ದಕ್ಕೆ ಕಳುಹಿಸಿರುತ್ತಾರೆ. ನಂತರ ಅಗ್ರಿಮೆಂಟ್ ಚಾರ್ಜ್, ಪ್ರೊಡಕ್ಟ್ ಅಮೌಂಟ್, ಶಿಫ್ಟಿಂಗ್ ಅಮೌಂಟ್, ಜಿಎಸ್ ಟಿ ಚಾರ್ಜ್, ಸಾಗಾಟ ವೆಚ್ಚ, ಸಾಫ್ಟ್ ವೇರ್ ವೆಚ್ವವೆಂದು ವಿವಿಧ ಚಾರ್ಜಸ್‌ಗಳಿಗಾಗಿ ಹಣ ಕಳುಹಿಸಲು  ತಿಳಿಸಿ ಸಾಗಾಟ ಸಮಯ ಏನಾದರೂ ಸಮಸ್ಯೆಯಾದರೆ ಕರೆ ಮಾಡಿ ಎಂದು ಹೇಳಿ ಚಾಲಕರ ನಂಬರ್‌ ನೀಡಿದ್ದಾರೆ. ಅದರಂತೆ ದೂರುದಾರರು ವಿವಿಧ ಚಾರ್ಜಸ್‌ಗಳಿಗಾಗಿ ಹಂತಹಂತವಾಗಿ ಅಪರಿಚಿತ ವ್ಯಕ್ತಿಗಳು ತಿಳಿಸಿದ ಬ್ಯಾಂಕ್‌ ಖಾತೆಗಳಿಗೆ ಒಟ್ಟು ರೂ. 17,60,810 ಹಣ ಕಳುಹಿಸಿರುತ್ತಾರೆ. ಇದಾದ ನಂತರ ಅಪರಿಚಿತ ವ್ಯಕ್ತಿಗಳು ಆಗಸ್ಟ್ 8ರಂದು ಕರೆ ಮಾಡಿ  ನಾವು ಬೆಂಗಳೂರಿಗೆ ಬಂದಿದ್ದು, 10ರಂದು ದೂರುದಾರರ ಮಡಂತ್ಯಾರ್‌ ನ  ಗೋಡೌನ್‌ ಗೆ ಬರುವುದಾಗಿ ತಿಳಿಸಿದ್ದಾರೆ. ನಂತರ ಆ.11ರಂದು ದೂರುದಾರರು ಆರೋಪಿ ನೀಡಿದ ಮೊಬೈಲ್‌  ನಂಬ್ರಗಳಿಗೆ ಕರೆ ಮಾಡಿದಾಗ ಎಲ್ಲಾ ಮೊಬೈಲ್‌ ನಂಬ್ರಗಳ ಸ್ವಿಚ್‌ ಆಫ್‌ ಆಗಿದ್ದರಿಂದ ವಂಚಕರು ಕೊಟ್ಟಿರುವ ಟೋಲ್ ಫ್ರೀ ನಂಗೆ ಕರೆ ಮಾಡಿದಾಗ ನಿಮ್ಮ ಪ್ರೊಡೆಕ್ಟ್‌ ಬರುತ್ತಿರುವುದರಿಂದ ಅಲ್ಲಿ ನೆಟ್‌ ವರ್ಕ್‌ ಸಮಸ್ಯೆ ಇರಬಹುದು ನಾವು ಅವರಿಗೆ ತಿಳಿಸುತ್ತೇವೆ.ಎಂದು ಹೇಳಿದ್ದಾರೆ. ನಂತರ ಯಾವುದೇ ಕರೆ ಬಂದಿರುವುದಿಲ್ಲ ಹಾಗೂ ದೂರುದಾರರು ಕರೆ ಮಾಡಿದರೆ ಸ್ವಿಚ್‌ ಆಫ್‌ ಎಂದು ಬರುತ್ತಿದ್ದು ಈ ಬಗ್ಗೆ ಸಂಶಯಗೊಂಡು ಬೇರೆಯವರಲ್ಲಿ ವಿಚಾರಿಸಿದಾಗ ಇದೊಂದು ಮೋಸದ ಜಾಲ ಎಂದು ತಿಳಿದು ಬಂದಿದೆ. ಅಪರಿಚಿತ ವ್ಯಕ್ತಿ ಕರೆ ಮಾಡಿ ಡೀಲರ್ ಶಿಪ್ ನೀಡುವುದಾಗಿ ಹೇಳಿ ರೂ.17,60,810 ಹಣ ಪಡೆದುಕೊಂಡು ವಂಚಿಸಿರುವ ಕುರಿತು ಸಿ ಇ ಎನ್‌ ಅಪರಾಧ ಪೊಲೀಸ್‌  ಠಾಣೆಗೆ ದೂರು ನೀಡಲಾಗಿದ್ದು, ಅದರಂತೆ ಪ್ರಕರಣ ದಾಖಲಾಗಿದೆ.

OPTIC WORLD

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಎಲ್ಲರಿಗೂ, ಎಲ್ಲೆಡೆಯೂ ಆರೋಗ್ಯ, ಜಾಗೃತಿಗೆ ಬೀದಿನಾಟಕ

ಬಂಟ್ವಾಳದ ಹಲವೆಡೆ ಸಂಸಾರ ಜೋಡುಮಾರ್ಗ ತಂಡದಿಂದ ಕಾರ್ಯಕ್ರಮ, ಸಾರ್ವಜನಿಕರಿಗೆ ಮಾಹಿತಿ (more…)

5 hours ago