ಪ್ರಮುಖ ಸುದ್ದಿಗಳು

News: ಗುಡ್ಡ ಕುಸಿದ ಘಟನೆ: ಮಣ್ಣು ತೆರವು ಪೂರ್ಣ, ರೈಲುಗಳ ಸಂಚಾರ ವಿವರ ಹೀಗಿದೆ

ಪ್ರಯಾಣಿಕರೇ ದಯವಿಟ್ಟು ಗಮನಿಸಿ!

ಸುಬ್ರಹ್ಮಣ್ಯ ರೋಡ್-ಸಕಲೇಶಪುರ ಘಾಟ್ ಭಾಗದ ಕಡಗರವಳ್ಳಿ-ದೋಣಿಗಲ್, ಎಡಕುಮೇರಿ–ಕಡಗರವಳ್ಳಿ ಮತ್ತು ಶಿರಿಬಾಗಿಲು–ಎಡಕುಮೇರಿ ಭಾಗಗಳಲ್ಲಿ ನಿನ್ನೆ ಗುಡ್ಡ ಕುಸಿತ ಸಂಭವಿಸಿದ ಬಳಿಕ ಮಣ್ಣು ತೆರವು ಕಾರ್ಯಚರಣೆ ಆರಂಭಗೊಂಡು ಇಂದು ಸಮಾಪ್ತಿಗೊಂಡಿದೆ ಹಾಗು ರೈಲುಗಳ ಸಂಚಾರಕ್ಕೆ ಯೋಗ್ಯವೆಂದು ಘೋಷಿಸಲಾಗಿದೆ.

ಜಾಹೀರಾತು

⏰ ವಿವಿರ ಈ ರೀತಿಯಿದೆ:

1.ಕಡಗರವಳ್ಳಿ–ದೋಣಿಗಲ್ ಭಾಗದಲ್ಲಿ 17.08.2025ರಂದು ಬೆಳಿಗ್ಗೆ 05:10ಕ್ಕೆ ಮಣ್ಣು ತೆರವು ಕಾರ್ಯಚರಣೆ ಪೂರ್ಣಗೊಂಡು ರೈಲಗಳ ಸಂಚಾರಕ್ಕೆ ಯೋಗ್ಯವಾಗಿದೆ ಎಂದು ಧೃಡಪಡಿಸಲಾಗಿದೆ.
2.ಎಡಕುಮೇರಿ–ಕಡಗರವಳ್ಳಿ ನಡುವೆ 17.08.2025ರಂದು ಬೆಳಿಗ್ಗೆ 06:30ಕ್ಕೆ ಮಣ್ಣು ತೆರವು ಕಾರ್ಯಚರಣೆ ಪೂರ್ಣಗೊಂಡು ರೈಲಗಳ ಸಂಚಾರಕ್ಕೆ ಯೋಗ್ಯವಾಗಿದೆ ಎಂದು ಧೃಡಪಡಿಸಲಾಗಿದೆ.
3.ಶಿರಿಬಾಗಿಲು–ಎಡಕುಮೇರಿ ನಡುವೆ 16.08.2025ರಂದು ಮಣ್ಣು ತೆರವು ಕಾರ್ಯಚರಣೆ ಪೂರ್ಣಗೊಂಡು ರೈಲಗಳ ಸಂಚಾರಕ್ಕೆ ಯೋಗ್ಯವಾಗಿದೆ ಎಂದು ಧೃಡಪಡಿಸಲಾಗಿದೆ.

✅ ಇದರೊಂದಿಗೆ ಪ್ರಯಾಣಿಕರ ರೈಲು ಸಂಚಾರ ಪುನರಾರಂಭಗೊಂಡಿದ್ದು, ಪ್ರಯಾಣಿಕರ ಸುರಕ್ಷಿತ ಹಾಗೂ ಸುಗಮ ಪ್ರಯಾಣವನ್ನು ಖಾತ್ರಿಪಡಿಸಲಾಗಿದೆ.

📢 ರೈಲು ಸಂಚಾರ ಮಾಹಿತಿ:

🚆 ರೈಲು ಸಂಖ್ಯೆ 16585 — ಸರ್ ಎಂ.ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು–ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲು ಸಕಲೇಶಪುರದಿಂದ ಹೊರಟಿದ್ದು, ಮಧ್ಯಾಹ್ನ 12:00 ಗಂಟೆಗೆ ಎಡಕುಮೇರಿ ರೈಲು ನಿಲ್ದಾಣವನ್ನು ದಾಟಿದೆ.
ಉಳಿದ ರೈಲುಗಳು ನಿನ್ನೆಯ ಪ್ರಕಟಣೆಯಂತೆ ಬದಲಿ ಮಾರ್ಗದಲ್ಲಿ ಸಂಚರಿಸುತ್ತಿದೆ.
ಇಂದು ಎಲ್ಲಾ ರೈಲುಗಳು ಎಂದಿನ ಮಾರ್ಗದಲ್ಲಿ ವಿಳಂಬವಾಗಿ ಓಡುವ ಸಾಧ್ಯತೆಯಿದೆ.

📲 ನಿಮ್ಮ ರೈಲು ಎಲ್ಲಿದೆ,ರೈಲಿನ ಸ್ಥಿತಿಯನ್ನು ತಿಳಿಯಲು ರೈಲ್ವೆ ಇಲಾಖೆಯ ಅಧಿಕೃತ ಜಾಲತಾಣ,ಅಪ್ಲಿಕೇಶನ್ “ಎನ್.ಟಿ.ಇ.ಎಸ್” ಅಥವ “ವೇರ್ ಇಸ್ ಮೈ ಟ್ರೈನ್” ಅಂತಹ ಖಾಸಗಿ ಅಪ್ಲಿಕೇಶನ್ ಬಳಸಿ.
📞 ತುರ್ತು ಸಹಾಯಕ್ಕಾಗಿ ದಯವಿಟ್ಟು 139ಗೆ ಕರೆಮಾಡಿ ಅಥವಾ @RailwaySeva ಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿ.

-ದಕ್ಷಿಣ ಕನ್ನಡ ಜಿಲ್ಲಾ ರೈಲು ಬಳಕೆದಾರರ ಸಮಿತಿ

OPTIC WORLD

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.