ಜಿಲ್ಲಾ ಸುದ್ದಿ

Bantwal: ರಸ್ತೆಯಲ್ಲಿ ಸಂಚರಿಸುವಾಗ ಹುಷಾರು… ಹೊಂಡಗಳಿವೆ

 ಮಳೆ ಬಂದ ಮೇಲೆ ಮತ್ತಷ್ಟು ಹದಗೆಟ್ಟ ಬಂಟ್ವಾಳದಿಂದ ಸಿದ್ಧಕಟ್ಟೆವರೆಗಿನ ಹೆದ್ದಾರಿಯ ಮಾರ್ಗದಲ್ಲಿ ಸಂಚರಿಸುವಾಗ ಹುಷಾರು.. ಹೊಂಡಗಳಿವೆ ಎಚ್ಚರಿಕೆ

ಜಾಹೀರಾತು

ರಸ್ತೆಯ ಮೇಲೊಂದು ದೊಡ್ಡ ಹಂಪ್. ವಾಹನದ ಚಕ್ರ ಅದರ ಮೇಲೆ ಬಂದು ಕೆಳಗಿಳಿದರೆ ಹೊಂಡ. ಇದು ಬಂಟ್ವಾಳದಿಂದ ಮೂಡುಬಿದಿರೆಗೆ ಹೊರಟರೆ, ಆರಂಭದಲ್ಲೇ ಬಂಟ್ವಾಳದ ತುಂಬ್ಯ ಜಂಕ್ಷನ್ (ಬೈಪಾಸ್) ನಲ್ಲಿ ದೊರಕುವ ಮೊದಲ ಆಘಾತ. ಹಾಗೆಯೇ ಮುಂದುವರಿದರೆ, ಸಣ್ಣಪುಟ್ಟ ಹೊಂಡಗಳು ಸಿಗುತ್ತವೆ. ಆದರೆ ಲೊರೆಟ್ಟೊ ದಾಟಿ ಸೊರ್ನಾಡು ಪ್ರವೇಶವಾದೊಡನೆ, ರಸ್ತೆ ಶೋಚನೀಯವಾಗುತ್ತದೆ. ರಾಯಿ ಸಮೀಪದವರೆಗೂ ಹೀಗೆಯೇ ಇದೆ.

OPTIC WORLD

ಅತಿಭಾರದ ವಾಹನಗಳ ಸಂಚಾರ, ಆಗಾಗ ರಸ್ತೆಯಂಚಿನಲ್ಲಿ ನಡೆಯುವ ಅನ್ಯಾನ್ಯ ಕಾಮಗಾರಿಗಳು ರಸ್ತೆಯ ಮೇಲೆ ಮತ್ತಷ್ಟು ಹೊಡೆತ ಬಿದ್ದಿವೆ.

ಪ್ರತಿ ವರ್ಷ ಮಳೆಗಾಲದಲ್ಲಿ ಬಂಟ್ವಾಳದಿಂದ ಮೂಡುಬಿದಿರೆಗೆ ಹೋಗಿ ಬರುವವರು ಹಾಗೂ ಆ ಮಾರ್ಗವನ್ನು ಬಳಸುವವರು ಈ ಯಾತನೆಯನ್ನು ಅನುಭವಿಸುತ್ತಿದ್ದಾರೆ. ಹೇಳಿಕೊಳ್ಳಲು ಇದು ರಾಜ್ಯ ಹೆದ್ದಾರಿ. ಆದರೆ ಆಗಾಗ ಹಾಳಾಗುತ್ತಿರುವುದು ವಿಪರ್ಯಾಸ. ಸ್ಥಳೀಯರು ಇವತ್ತಲ್ಲ, ನಾಳೆ ಸರಿಹೋಗುತ್ತದೆ ಎಂಬ ಆಶಾಭಾವನೆ ಹೊಂದಿದ್ದಾರೆ.

ಯಾವ ಕಡೆಯಲ್ಲಿ ಸಮಸ್ಯೆ:

ಬಂಟ್ವಾಳದಿಂದ ಸೊರ್ನಾಡು, ಅಣ್ಣಳಿಕೆ, ಕುದ್ಕುಳಿ, ರಾಯಿವರೆಗಿನ ಭಾಗ ಹದಗೆಟ್ಟ ರಸ್ತೆಯ ಪ್ರತ್ಯಕ್ಷದರ್ಶನ ಮಾಡಿಸುತ್ತವೆ. ಮಳೆ ಬಂದರಂತೂ ಯಾವ ಭಾಗದಲ್ಲಿ ಸಂಚರಿಸಿದರೂ ಹೊಂಡಕ್ಕೆ ಚಕ್ರ ಇಳಿದೇ ಸಾಗುತ್ತದೆ. ಅಣ್ಣಳಿಕೆಯಲ್ಲಂತೂ ರಸ್ತೆಯೇ ಕಾಣಿಸದಾದ ಪರಿಸ್ಥಿತಿ ಇದೆ. ಮುಲಿಯ ಬಸ್ ನಿಲ್ದಾಣದ ಬಳಿ ರಸ್ತೆಯೇ ಕೆತ್ತಿಹೋದಂತಾಗಿದೆ. ಶಾಲಾ, ಕಾಲೇಜುಗಳಿಗೆ ತೆರಳುವ ಮಕ್ಕಳು ಬಸ್ಸುಗಳಿಗೆ ಈ ಹೊಂಡಗಳ ಪಕ್ಕದಲ್ಲೇ ಕಾಯುತ್ತಾರೆ. ಬಹುತೇಕರು ಮೂಡುಬಿದಿರೆ ಅಥವಾ ಬಂಟ್ವಾಳಕ್ಕೆ ತಮ್ಮ ವ್ಯವಹಾರಗಳಿಗಾಗಿ ಸಾಗುತ್ತಾರೆ. ಇಂಥವರಿಗೆಲ್ಲಾ ಹದಗೆಟ್ಟ ರಸ್ತೆ ತಲೆನೋವಿನ ಜೊತೆಗೆ ಬೆನ್ನುನೋವು ತಂದೊದಗಿಸಿದೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.