ಪ್ರಮುಖ ಸುದ್ದಿಗಳು

MANGALORE RAIN: ಮಂಗಳೂರಲ್ಲಿ ಮತ್ತೆ ಜಾಗ ಹುಡುಕಿದ ಮಳೆನೀರು – ಪಂಪ್ ವೆಲ್, ಪಡೀಲ್ ಸಹಿತ ರಸ್ತೆಗಳು ಜಲಾವೃತ – PHOTOS and VIDEOS

ಜಾಹೀರಾತು

ಮಂಗಳೂರು ಮಹಾನಗರದಲ್ಲಿ ಮಳೆನೀರು ಹರಿದುಹೋಗಲು ಸರಿಯಾದ ದಿಕ್ಕಿಲ್ಲದೆ ರಸ್ತೆಗೇ ನುಗ್ಗಿದ ಪರಿಣಾಮ, ಪಡೀಲ್ ಅಂಡರ್ ಪಾಸ್, ಪಂಪ್ ವೆಲ್, ಮಂಗಳೂರು ನಗರದ ರಸ್ತೆಗಳು, ಹೆದ್ದಾರಿಯ ಮಧ್ಯೆ.. ರೈಲ್ವೆ ನಿಲ್ದಾಣ ಸಹಿತ ಬಹುತೇಕ ಮುಖ್ಯ ಭಾಗಗಳು ಶನಿವಾರ ಸಂಜೆ ವೇಳೆ ಜಲಾವೃತಗೊಂಡವು. ಸರಿಯಾದ ಸೂರಿಲ್ಲದ ಬಸ್ ನಿಲ್ದಾಣಗಳು, ಚರಂಡಿಗಳಿಲ್ಲದ ಫುಟ್ ಪಾತ್ ಗಳು, ತೆರೆದ ಚರಂಡಿಗಳು, ರಸ್ತೆಯವರೆಗೆ ಇಂಟರ್ಲಾಕ್ ಹಾಕಿಕೊಂಡಿರುವ ಸುಂದರ ಕಟ್ಟಡಗಳ ಪಾರ್ಕಿಂಗ್ ಜಾಗಗಳು.. ಹೀಗೆ ಕಂಡಕಂಡಲ್ಲಿ ನೀರು ನುಗ್ಗಿತು. ಕಳೆದ ಹತ್ತು ದಿನಗಳ ಹಿಂದೆ ಭಾರಿ ಮಳೆಯ ಸಂದರ್ಭ, ಅನಾಹುತಗಳೇ ಸಂಭವಿಸಿದರೂ ಇನ್ನೂ ನೀರು ಸರಿಯಾಗಿ ಹರಿದುಹೋಗಲು ವ್ಯವಸ್ಥೆ ಕಲ್ಪಿಸದ ಕಾರಣ ಹೀಗಾಗಿದೆ ಎಂದು ಸಾರ್ವಜನಿಕರು ಆಡಿಕೊಳ್ಳುವಂತಾಯಿತು. ಇಲ್ಲಿ ಕೆಲವು ಫೊಟೋ ಮತ್ತು ವಿಡಿಯೋಗಳನ್ನು ನೀಡಲಾಗಿದೆ.

PHOTO: MANJU NEERESHWALYA

PHOTO: MANJU NEERESHWALYA

PHOTO: SHREEKARA

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.