ಬಂಟ್ವಾಳ

ರೋಟರಿ ಜಿಲ್ಲೆಯಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವ ಹಲವು ಕಾರ್ಯಕ್ರಮ ಅನುಷ್ಠಾನ – ಜಿಲ್ಲಾ ಗವರ್ನರ್ ವಿಕ್ರಮ್ ದತ್ತಾ ನೀಡಿದ ಮಾಹಿತಿ ಹೀಗಿದೆ

ರೋಟರಿ ಜಿಲ್ಲೆ ೩೧೮೧ ದಕ್ಷಿಣ ಕನ್ನಡ, ಕೊಡಗು, ಮೈಸೂರು, ಚಾಮರಾಜನಗರ ಒಳಗೊಂಡಿದ್ದು, ಉತ್ತಮ ಜನೋಪಯೋಗಿ ಕೆಲಸಗಳನ್ನು ಮಾಡಿದೆ, ಅವುಗಳ ಪೈಕಿ ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಆರಂಭಿಸಲಾದ ಹ್ಯೂಮನ್ ಮಿಲ್ಕ್ ಬ್ಯಾಂಕ್ ಪ್ರಮುಖವಾದದ್ದು ಏಂದು ಜಿಲ್ಲಾ ಗವರ್ನರ್ ವಿಕ್ರಮ್ ದತ್ತಾ ಹೇಳಿದ್ದಾರೆ.

ಜಾಹೀರಾತು

 

ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಸರ್ವೈಕಲ್ ಕ್ಯಾನ್ಸರ್ ಮಾಹಿತಿ, ಹಿರಿಯರಿಗೆ ಗಾಲಿಕುರ್ಚಿ ಸಹಿತ ಸಾಧನಗಳ ವಿತರಣೆ, ಬ್ಲಡ್, ಐ ಬ್ಯಾಂಕ್ ಗಳು, ಚರ್ಮ ಬ್ಯಾಂಕ್ ಸಹಿತ ಹಲವು ಆರೋಗ್ಯ ಸಂಬಂಧಿ ಯೋಜನೆಗಳನ್ನು ಯಶಸ್ವಿಯಾಗಿ ಹಾಗೂ ಪರಿಣಾಮಕಾರಿಯಾಗಿ ಅನುಷ್ಠಾನಿಸಲಾಗಿದೆ. ಬಂಟ್ವಾಳ ಕ್ಲಬ್ ಬೇಬಿ ಕುಂದರ್ ಅಧ್ಯಕ್ಷತೆಯಲ್ಲಿ ಉತ್ತಮ ಕಾರ್ಯವನ್ನು ಮಾಡುತ್ತಿದೆ ಎಂದರು.

https://www.opticworld.net/

ಈ ಸಂದರ್ಭ ಮಾತನಾಡಿದ ಬಂಟ್ವಾಳ ರೋಟರಿ ಅಧ್ಯಕ್ಷ ಬೇಬಿ ಕುಂದರ್, ಗವರ್ನರ್ ಭೇಟಿ ವೇಳೆ ಪೊಳಲಿ ಸರಕಾರಿ ಶಾಲಾ ಕೊಠಡಿಗೆ ೨.೫ ಲಕ್ಷ, ನರಿಕೊಂಬು ಶಾಲಾ ಅಡುಗೆ ಕೊಠಡಿ ಮೇಲ್ಛಾವಣಿಗೆ ೨.೫ ಲಕ್ಷ, ಅಂತರ್ತರಗತಿ ಧ್ವನಿವರ್ಧಕಕ್ಕೆ ೩ ಲಕ್ಷ ರೂ ನೆರವು ನೀಡಲಾಗಿದ್ದು, ಕಳೆದ ೫೫ ವರ್ಷಗಳಲ್ಲಿ ತನ್ನದೇ ವೈಶಿಷ್ಟ್ಯಮಯ ಚಟುವಟಿಕೆಗಳಿಂದ ಸಮಾಜಮುಖಿಯಾಗಿದೆ ಎಂದರು.
ರೋಟರಿ ಸಹಾಯಕ ಗವರ್ನರ್ ಮಹಮ್ಮದ್ ವಳವೂರು, ಜಿಲ್ಲಾ ಕಾರ್ಯದರ್ಶಿ ರಿತೇಶ್ ಬಾಳಿಗಾ, ಜೋನಲ್ ಲೆಫ್ಟಿನೆಂಟ್ ಪುಷ್ಪರಾಜ್ ಹೆಗ್ಡೆ, ರೋಟರಿ ಬಂಟ್ವಾಳ ಜೊತೆ ಕಾರ್ಯದರ್ಶಿ ವೀರೇಂದ್ರ ಅಮೀನ್ ಹಾಗೂ ಪೂರ್ವಾಧ್ಯಕ್ಷ ಕೆ.ನಾರಾಯಣ ಹೆಗ್ಡೆ ಉಪಸ್ಥಿತರಿದ್ದರು.

PRESS MEET

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.