ಬಂಟ್ವಾಳ

ಶ್ರೀ ರಕ್ತೇಶ್ವರಿ ದೇವಸ್ಥಾನ ಬ್ರಹ್ಮಕಲಶೋತ್ಸವ: ಕುಂಭನಿಧಿ ಉದ್ಘಾಟನೆ, ಸಂಧ್ಯಾ ಭಜನಾ ಪ್ರಾರಂಭೋತ್ಸವ

ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ದೇವಸ್ಥಾನದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಪ್ರಯುಕ್ತ ಕುಂಭನಿಧಿಯ ಉದ್ಘಾಟನೆ ಮತ್ತು 48 ದಿವಸಗಳ ಸಂಧ್ಯಾ ಭಜನೆ ಪ್ರಾರಂಭೋತ್ಸವ  ಸನ್ನಿಧಿಯಲ್ಲಿ ನಡೆಯಿತು.

ಬ್ರಹ್ಮ ಕಲಶ ಸಮಿತಿಯ ಕೋಶಾಧಿಕಾರಿ ನಾರಾಯಣ ಹೆಗ್ಡೆ ಕುಂಭ ನಿಧಿಯ ಉದ್ಘಾಟನೆ ನೆರವೇರಿಸಿದರು. ಸಂಧ್ಯಾ ಭಜನೆಯ ದೀಪ ಪ್ರಜ್ವಲನೆಯನ್ನು ಅರ್ಚಕ ರಘುಪತಿ ಭಟ್ ದಂಪತಿ, ಸೇವಾ ಸಮಿತಿ ಮಾಜಿ ಅಧ್ಯಕ್ಷರಾದ ಗೋಪಾಲ ಸುವರ್ಣ, ರಾಜೇಶ್ ಎಲ್. ನಾಯಕ್, ಸೋಮನಾಥ ನಾಯ್ಡು, ಶ್ರೀಧರ ಮಲ್ಲಿ ದಂಪತಿ ನೆರವೇರಿಸಿದರು.

https://www.opticworld.net/

ಈ ಸಂದರ್ಭ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಬಿ  ವಿಶ್ವನಾಥ , ಕಾರ್ಯದರ್ಶಿ ಶಿವಶಂಕರ್, ಕೋಶಾಧಿಕಾರಿ ಮೋಹನ್, ಸದಸ್ಯರಾದ ಸತೀಶ್ ಕುಮಾರ್, ಬ್ರಹ್ಮ ಕಲಶ ಸಮಿತಿಯ ಕಾರ್ಯಾಧ್ಯಕ್ಷರಾದ ಸಂಜೀವ ಪೂಜಾರಿ ಗುರುಕೃಪ  ,ಸಹ ಕೋಶಾಧಿಕಾರಿ ವಸಂತ್ ರಾವ್, ಸಮಿತಿಯ ಉಪಾಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ರಂಗೋಲಿ, ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಿತಿಯ ಪ್ರಧಾನ  ಕಾರ್ಯದರ್ಶಿ ಐತಪ್ಪ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು, ಶ್ರೀವತ್ಸ ಭಟ್ ಮತ್ತು ಸುದರ್ಶನ್ ಸಹಕರಿಸಿದರು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts

ಮಾಜಿ ಸಚಿವ ರೈ ನೇತೃತ್ವದಲ್ಲಿ ಸೌಹಾರ್ದ ಇಫ್ತಾರ್

ಮನುಷ್ಯ ಮನುಷ್ಯನ ನಡುವಿನ ವಿಶ್ವಾಸವೃದ್ಧಿಗೆ ಇಫ್ತಾರ್ ಕೂಟ: ರಮಾನಾಥ ರೈ (more…)

1 day ago