ಬಂಟ್ವಾಳ

ಸಂಚಯಗಿರಿ ರಾಣಿಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಉದಯಗಾನ

ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಚಂದ್ರಮ ಕಲಾ ಮಂಟಪದಲ್ಲಿ ಭಾನುವಾರ ಬೆಳಗ್ಗೆ ಆಕಾಶವಾಣಿ ಕಲಾವಿದ ಮೌನೇಶ್ ಕುಮಾರ್ ಛಾವಣಿ ಅವರ ಉದಯಗಾನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.

.

ಬಂಟ್ವಾಳದ ವೈದ್ಯದಂಪತಿ ಡಾ. ವಿಜಯ್ ತೋಳ್ಪಾಡಿ ಹಾಗೂ ಡಾ.ವೀಣಾ ತೋಳ್ಪಾಡಿ ಆಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳಗ್ಗೆ 6ರಿಂದ 8ರವರೆಗೆ ದಾಸಸಾಹಿತ್ಯ ಸಹಿತ ಹಲವು ಕೃತಿಗಳನ್ನು ಮೌನೇಶ್ ಕುಮಾರ್ ಛಾವಣಿ ಪ್ರಸ್ತುತಪಡಿಸಿದರು. ಈ ಸಂದರ್ಭ ತಬಲಾದಲ್ಲಿ ಗೌತಮ್ ಜಪ್ಪಿನಮೊಗರು, ಕೊಳಲಿನಲ್ಲಿ ಲೋಕೇಶ್ ಸಂಪಿಗೆ, ತಾನ್ ಪುರದಲ್ಲಿ ಭಾರತೀಶ್ ಛಾವಣಿ ಸಾಥ್ ನೀಡಿದರು. ಕಲಾವಿದರನ್ನು ಹಿರಿಯ ವೈದ್ಯ ಡಾ. ಎಂ.ಎಸ್. ಭಟ್ ಗೌರವಿಸಿದರು. ಈ ಸಂದರ್ಭ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಹಾಗೂ ನಿರ್ದೇಶಕರಾದ ಡಾ. ಆಶಾಲತಾ ಸುವರ್ಣ ಉಪಸ್ಥಿತರಿದ್ದರು.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ