ಬಿ.ಸಿ.ರೋಡಿನ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಚಂದ್ರಮ ಕಲಾ ಮಂಟಪದಲ್ಲಿ ಭಾನುವಾರ ಬೆಳಗ್ಗೆ ಆಕಾಶವಾಣಿ ಕಲಾವಿದ ಮೌನೇಶ್ ಕುಮಾರ್ ಛಾವಣಿ ಅವರ ಉದಯಗಾನ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು.
.
ಬಂಟ್ವಾಳದ ವೈದ್ಯದಂಪತಿ ಡಾ. ವಿಜಯ್ ತೋಳ್ಪಾಡಿ ಹಾಗೂ ಡಾ.ವೀಣಾ ತೋಳ್ಪಾಡಿ ಆಯೋಜನೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬೆಳಗ್ಗೆ 6ರಿಂದ 8ರವರೆಗೆ ದಾಸಸಾಹಿತ್ಯ ಸಹಿತ ಹಲವು ಕೃತಿಗಳನ್ನು ಮೌನೇಶ್ ಕುಮಾರ್ ಛಾವಣಿ ಪ್ರಸ್ತುತಪಡಿಸಿದರು. ಈ ಸಂದರ್ಭ ತಬಲಾದಲ್ಲಿ ಗೌತಮ್ ಜಪ್ಪಿನಮೊಗರು, ಕೊಳಲಿನಲ್ಲಿ ಲೋಕೇಶ್ ಸಂಪಿಗೆ, ತಾನ್ ಪುರದಲ್ಲಿ ಭಾರತೀಶ್ ಛಾವಣಿ ಸಾಥ್ ನೀಡಿದರು. ಕಲಾವಿದರನ್ನು ಹಿರಿಯ ವೈದ್ಯ ಡಾ. ಎಂ.ಎಸ್. ಭಟ್ ಗೌರವಿಸಿದರು. ಈ ಸಂದರ್ಭ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕಾರಾಮ ಪೂಜಾರಿ ಹಾಗೂ ನಿರ್ದೇಶಕರಾದ ಡಾ. ಆಶಾಲತಾ ಸುವರ್ಣ ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…