ಪುಂಜಾಲಕಟ್ಟೆ

ಭದ್ರಾ ಹೋಂ ಅಪ್ಲೈನ್ಸಸ್ ನಲ್ಲಿ ವಿಕ ದೀಪೋತ್ಸವ ಬಹುಮಾನ ವಿತರಣೆ

ಬಂಟ್ವಾಳದ ಬಸ್ತಿಪಡ್ಪು, ಬಿ.ಸಿ.ರೋಡ್ ಹಾಗೂ ಮಡಂತ್ಯಾರಿನಲ್ಲಿ ಮಳಿಗೆಗಳನ್ನು ಹೊಂದಿರುವ ಭದ್ರಾ ಹೋಂ ಅಪ್ಲೈನ್ಸಸ್ ಗೃಹೋಪಯೋಗಿ ಉತ್ಪನ್ನಗಳ ಮಾರಾಟದಲ್ಲಿ ತನ್ನ ವಿಶ್ವಾಸಾರ್ಹ ಸೇವೆಯ ಮೂಲಕ ಗಮನ ಸೆಳೆದಿದ್ದು, ದೀಪಾವಳಿಯ ಸಂದರ್ಭ ಗ್ರಾಹಕರಿಗೆ ವಿಜಯ ಕರ್ನಾಟಕ ಸಹಯೋಗದಲ್ಲಿ ನಡೆದ ವಿಕ ದೀಪೋತ್ಸವ ಅದೃಷ್ಟ ಚೀಟಿಯ ಬಹುಮಾನ ವಿತರಣೆ ಮಡಂತ್ಯಾರು ಮಳಿಗೆ ಹಾಗೂ ಬಂಟ್ವಾಳ ಮಳಿಗೆಯಲ್ಲಿ ಜ.15ರಂದು ಬುಧವಾರ ನಡೆಯಿತು.

ಭದ್ರಾ ಗ್ರಾಹಕ ಮಡಂತ್ಯಾರಿನ ಸುರೇಶ್ ಪೂಜಾರಿ ಅವರು ಭದ್ರಾ ಸಂಸ್ಥೆಯ ಮಾಲೀಕರಾದ ಮಂಜುನಾಥ ಆಚಾರ್ಯ ಮತ್ತು ಮೇಘಾ ಆಚಾರ್ಯ ಅವರಿಂದ ವಿಕ ದೀಪೋತ್ಸವದ ಟಿ.ವಿ. ಬಹುಮಾನ ಪಡೆದರು. ಗ್ರಾಹಕರಾದ ಕಿಶೋರ್, ರವಿಶಂಕರ ಶೆಟ್ಟಿ, ಸುಮಂತ್ ಶೆಟ್ಟಿ ಮತ್ತು ಮಧು ವಿವಿಧ ಬಹುಮಾನಗಳನ್ನು ಪಡೆದರು. ಈ ಸಂದರ್ಭ ಭದ್ರಾ ಸಂಸ್ಥೆ ತನ್ನ ಗ್ರಾಹಕರಿಗೆ ಕ್ರಿಸ್ಮಸ್, ಹೊಸ ವರ್ಷದ ನಿಮಿತ್ತ ನೀಡಿದ್ದ ಅದೃಷ್ಟ ಚೀಟಿಯ ಡ್ರಾ ನಡೆಯಿತು. ಮಾಲ್ಸಿ ಆಚಾರ್ಯ ಬಂಪರ್ ಬಹುಮಾನಿತರ ಆಯ್ಕೆ ಮಾಡಿದರು. ಪತ್ರಕರ್ತ ಹರೀಶ್ ಮಾಂಬಾಡಿ ಉಪಸ್ಥಿತರಿದ್ದರು.

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ

Recent Posts