ಬಂಟ್ವಾಳ

ಅನಾರೋಗ್ಯಕ್ಕೆ ತುತ್ತಾದ ಸದಸ್ಯರಿಗೆ ಗ್ಯಾರೇಜು ಮಾಲೀಕರ ಸಂಘದಿಂದ ನೆರವು

ಜಾಹೀರಾತು

ಅನಾರೋಗ್ಯಕ್ಕೆ ತುತ್ತಾದ ಮೆಕ್ಯಾನಿಕ್ ಪುರುಷೋತ್ತಮ ಗೌಡ ಅವರಿಗೆ ಬಂಟ್ವಾಳದ ಗ್ಯಾರೇಜು ಮಾಲಕರ ಸಂಘ ವತಿಯಿಂದ ನವೀನ್ ಕುಲಾಲ್ ನೇತೃತ್ವದಲ್ಲಿ ಸಂಗ್ರಹಿಸಲಾದ 16500 ರೂಗಳ ಸಹಾಯಧನ ನೀಡಲಾಯಿತು, ಅಧ್ಯಕ್ಷರಾದ ಸುಧೀರ್ ಪೂಜಾರಿ ಮಾತನಾಡಿ ಸಂಘದ ಸದಸ್ಯರ ಕಷ್ಟಗಳಿಗೆ  ಸ್ಪಂದಿಸುವುದು ಮಾನವ ಧರ್ಮ ಇದನ್ನು ಪಾಲಿಸಿಕೊಂಡು ಬಂದಿರುವುದು ನಮ್ಮ ಸಂಘದ ಹೆಮ್ಮೆ ಎಂದು ತಿಳಿಸಿದರು ,

ಈ ಸಂದರ್ಭ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಲಾಲ್, ಕೋಶಾಧಿಕಾರಿ ಭಾಸ್ಕರ್ ಕುಲಾಲ್, ಮಾಜಿ ಅಧ್ಯಕ್ಷರಾದ ಜಗದೀಶ್ ರೈ, ಉಪಾಧ್ಯಕ್ಷರಾದ ಜನಾರ್ಧನ್ ಕುಲಾಲ್, ಪ್ರಸಾದ್ ಬಂಗೇರ, ಜೊತೆ ಕಾರ್ಯದರ್ಶಿ ರಮೇಶ್ ಸಾಲಿಯನ್, ಗೌರವ ಸಲಹೆಗಾರದ ಸುಧಾಕರ್ ಸಾಲ್ಯಾನ್, ವಿಶ್ವನಾಥ ಬಿ, ಅಣ್ಣು ಪೂಜಾರಿ, ಸಂಘಟನಾ ಸಂಚಾಲಕರಾದ ಗಣೇಶ್ ಸುವರ್ಣ, ಪ್ರಶಾಂತ್ ಭಂಡಾರ್ಕರ್, ರಮೇಶ್ ಭಂಡಾರಿ, ರಮೇಶ್ ಪೂಜಾರಿ, ಸಂಘಟನಾ ಕಾರ್ಯದರ್ಶಿ ನವೀನ್ ಕುಲಾಲ್, , ರಾಜೇಂದ್ರ ಮಾಣಿ, ಕ್ರೀಡಾ ಕಾರ್ಯದರ್ಶಿಗಳಾದ ಯೋಗೀಶ್, ರಾಮ ಕುಲಾಲ್, ಸೋಮನಾಥ ಸಾಲ್ಯಾನ್, ಗಣೇಶ್ ಕುಲಾಲ್ ಸದಸ್ಯತ್ವ ಅಭಿವೃದ್ಧಿ ಸಂಚಾಲಕರಾದ ಲಕ್ಷ್ಮಣ್ ಕುಲಾಲ್ ಹಾಗು ಸಂಘದ ಸದಸ್ಯರು ಉಪಸ್ತಿತರಿದ್ದರು,

ಅನಾರೋಗ್ಯಕ್ಕೆ ತುತ್ತಾದ ಸಕ್ರಿಯ ಸದಸ್ಯಗೆ ನೆರವು: ಆಕಸ್ಮಿಕವಾಗಿ ಅನಾರೋಗ್ಯಕ್ಕೆ ತುತ್ತಾದ ಸಂಘದ ಸಕ್ರಿಯ ಸದಸ್ಯರಾದ ದಿನೇಶ್ ಕುಲಾಲ್ ಅವರಿಗೆ ಮಾನವೀಯ ನೆಲೆಯಲ್ಲಿ ,ಸಂಘದ ಸದಸ್ಯರೆಲ್ಲರೂ ಜೊತೆಗೂಡಿ ತುರ್ತು ಚಿಕಿತ್ಸೆಗಾಗಿ ಸುಮಾರು 1,01,500 ರೂಗಳನ್ನು ಆಟೋ ಲೈನ್ಸ್ ನಲ್ಲಿ ನಡೆದ ಸಂಘದ ಮಾಸಿಕ ಸಭೆಯಲ್ಲಿ ದಿನೇಶ್ ಕುಲಾಲ್ ಅವರ ಪತ್ನಿಗೆ ನೀಡಲಾಯಿತು,

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.