ಬಂಟ್ವಾಳ: ಮನೆ ಮಂದಿ ಇಲ್ಲದಾಗ, ಕಿಟಕಿ ಸರಳು ಬಗ್ಗಿಸಿ ಸುಮಾರು 1.25 ಲಕ್ಷ ರೂ ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ಕಳವು ಮಾಡಿದ ಪ್ರಕರಣ ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದಲ್ಲಿ ನಡೆದಿದೆ.
ಮನೆ ಮಾಲಕಿ ಜಯಲಕ್ಷ್ಮೀ ಎಂಬವರು ಸೆ.7ರಂದು ತನ್ನ ಮನೆಗೆ ಬೀಗ ಹಾಕಿ, ತಾಯಿ ಮನೆ ಪುತ್ತೂರು ಸಂಟ್ಯಾರ್ ಕೈಕಾರ್ ಎಂಬಲ್ಲಿಗೆ ಹೋಗಿರುತ್ತಾರೆ. ಸೆ.23ರಂದು ಸಂಜೆ ಮನೆಗೆ ಹಿಂತಿರುಗಿ ಬಂದಾಗ, ಮನೆಯ ಬಾಗಿಲಿನ ಡೋರ್ ಲಾಕ್ ಜಖಂಗೊಂಡಿತ್ತು. ಕಿಟಕಿಯ ಸರಳನ್ನು ಬಗ್ಗಿಸಿ ಜಖಂ ಮಾಡಿ ಯಾರೋ ಒಳ ಪ್ರವೇಶ ಮಾಡಿರುವುದು ಕಂಡುಬಂದಿತ್ತು. ಮನೆಯ ಹಿಂಬದಿ ಹೋಗಿ ನೋಡಿದಾಗ ಹಿಂಬದಿ ಬಾಗಿಲು ತೆರೆದಿದ್ದು, ಒಳಗೆ ಹೋಗಿ ನೋಡಿದಾಗ, ಮನೆಯಲ್ಲಿದ್ದ ಗೋಡ್ರೇಜ್ ಮತ್ತು ಬೇಡ್ ರೂಂ ನಲ್ಲಿದ್ದ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿರುವುದಲ್ಲದೇ, ಗೋಡ್ರೇಜ್ ನಲ್ಲಿ ಇಟ್ಟಿದ್ದ ಸುಮಾರು 2.5 ಪವನ್ ತೂಕದ 2 ಚಿನ್ನದ ಬಳೆಗಳು ಮತ್ತು 25000 ರೂ ನಗದನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು , ಕಳುವಾದ ಸೋತ್ತುಗಳ ಒಟ್ಟು ಮೌಲ್ಯ 1,25,000 ಆಗಬಹುದು ಎಂಬುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…