ನಿಮ್ಮ ಧ್ವನಿ

ಬಿ.ಸಿ.ರೋಡ್ ಸರ್ಕಲ್ ನಲ್ಲಿ ಮಳೆ ಬಂದ್ರೆ ಕೃತಕ ಈಜುಕೊಳ!!

ಬಿ.ಸಿ.ರೋಡ್

ಇದು ಬಿ.ಸಿ.ರೋಡ್ ಸರ್ಕಲ್ ದೃಶ್ಯ. ಪ್ರಖರ ಬಿಸಿಲಿದ್ದರೆ, ನೀರು ಖಾಲಿಯಾಗುತ್ತದೆ. ಮಳೆ ಬಂದರೆ ಮತ್ತೆ ಹೀಗೆ ಇರುತ್ತದೆ. ವಾಹನಸವಾರರು ಸುತ್ತುವರಿದು ಸಂಚರಿಸುವುದರಿಂದ ಯಾವುದೇ ಅಪಾಯ ಉಂಟಾಗದಂತೆ ಸುತ್ತ ಟೇಪನ್ನು ಅಳವಡಿಸಿದ್ದಾರೆ. ವೃತ್ತ ನಿರ್ಮಾಣಕ್ಕೆ ಜೆಸಿಬಿ ಮೂಲಕ ಅಗೆದ ಪರಿಣಾಮ ಪುರಸಭೆಯ ಕುಡಿಯುವ ನೀರು ಪೂರೈಕೆಯ ಕೊಳವೆಗಳಿಗೆ ಹಾನಿಯಾಗಿದ್ದು ಬಗ್ಗೆ ಮಾಹಿತಿ ತಿಳಿದ ಪುರಸಭಾಧ್ಯಕ್ಷ ವಾಸು ಪೂಜಾರಿ ಲೊರೆಟ್ಟೋ ಅವರು ವೃತ್ತ ನಿರ್ಮಾಣದ ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ರಾಷ್ಟ್ರೀಯ ಹೆದ್ದಾರಿ ಇಲಾಖಾ ಇಂಜಿನಿಯರ್ ಅವರಿಗೆ ಕರೆ ಮಾಡಿ ಸಮಸ್ಯೆಯನ್ನು ವಿವರಿಸಿದ್ದಾರೆ. ಇದಕ್ಕೆ ಸ್ಪಂದಿಸಿದ ರಾ.ಹೆ. ಅಧಿಕಾರಿಗಳು  ಕಾಮಗಾರಿ ನಡೆಯುವ ಸ್ಥಳದಲ್ಲಿ ಪಂಪ್ ಅಳವಡಿಸಿ ನೀರನ್ನು ಟ್ಯಾಂಕರ್ ಗೆ ತುಂಬಿಸಿ ಖಾಲಿ ಮಾಡಿದ್ದಾರೆ. ಈ ನೀರಿನ ಒರತೆಯು ಇರುವುದರಿಂದ ನೀರು ಖಾಲಿ ಮಾಡಿಷ್ಟು ಸ್ಥಳದಲ್ಲಿ ನೀರು ತುಂಬುತ್ತಲೇ ಇತ್ತು. ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ವೇಳೆ ಇಂಥದ್ದೇನಾದರೂ ಯಡವಟ್ಟುಗಳು ಆಗುತ್ತಲೇ ಇವೆ.

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ