ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ ಡಿಪಿಐ) ದ ಸಂಸ್ಥಾಪನಾ ದಿನದ ಅಂಗವಾಗಿ ಮಾಣಿ ವಲಯ ಸಮಿತಿ ವತಿಯಿಂದ ಸೂರಿಕುಮೇರು ಮಸೀದಿ ಬಳಿ ದ್ವಜಾರೋಹಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಪೆರಾಜೆ ಬೂತ್ ಸಮಿತಿ ಅಧ್ಯಕ್ಷ ಗಫೂರ್ ಬುಡೋಳಿ ದ್ವಜಾರೋಹಣಗೈದರು, ಕಲ್ಲಡ್ಕ ಬ್ಲಾಕ್ ಜತೆ ಕಾರ್ಯದರ್ಶಿಸಿದ್ದೀಖ್ ಕೊಡಾಜೆ ಅಧ್ಯಕ್ಷತೆ ವಹಿಸಿದ್ದರು, ಕಾರ್ಯಕ್ರಮವನ್ನುದ್ದೇಶಿಸಿ ಕಲ್ಲಡ್ಕ ಬ್ಲಾಕ್ ಸಮಿತಿ ಸದಸ್ಯ ಇಬ್ರಾಹಿಂ ಸಮದ್ ಮಾತನಾಡಿದರು, ಈ ಸಂಧರ್ಭ ಆಸಿಫ್ ಬುಡೋಳಿ, ಇಂತಿಯಾಝ್ ಕೊಡಾಜೆ, ಮುನೀರ್ ಬುಡೋಳಿ, ನಿಸಾರ್, ಶಾಫಿ ಸೂರಿಕುಮೇರ್ ಮೊದಲಾದವರು ಉಪಸ್ಥಿತರಿದ್ದರು. ಸಮಿತಿ ಸದಸ್ಯ ಇರ್ಫಾನ್ ಬುಡೋಳಿ ಕಾರ್ಯಕ್ರಮ ನಿರೂಪಿಸಿದರು