ಬಂಟ್ವಾಳ

ಬಂಟ್ವಾಳಕ್ಕೆ ಬಂದ ಓರಿಗಾಮಿ ಕಲೆಯ ವೈಶಿಷ್ಟ್ಯ ಹೊತ್ತ ಬಸ್, ಏನಿತ್ತು ಇದರಲ್ಲಿ?

ಒರಿಗಾಮಿ ಕಲೆ

ಮುಂಬಯಿಯ ಛತ್ರಪತಿ ಶಿವಾಜಿ ಮಹರಾಜ್ ವಸ್ತುಸಂಗ್ರಹಾಲಯ ಒರಿಗಾಮಿ‌ ಕಲಾಕೃತಿಗಳನ್ನೊಳಗೊಂಡ “ಒರಿಗಮಿ ಬಸ್” ಇಂದು ಬಂಟ್ವಾಳ ತಾಲೂಕಿಗೆ ಆಗಮಿಸಿದ್ದು, ಬಿ.ಸಿ.ರೋಡಿನ ಮಿನಿವಿಧಾನ ಸೌಧದ ಮುಂಭಾಗದಲ್ಲಿ ಶಾಲಾಮಕ್ಕಳು ಹಾಗೂ ಸಾರ್ವಜನಿಕರ ವೀಕ್ಷಣೆಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಚಾಲನೆ ನೀಡಿದರು. ರೋಟರಿ ಕ್ಲಬ್ ಪ್ರಮುಖರಾದ ಮಂಜುನಾಥ ಆಚಾರ್ಯ, ಪ್ರಕಾಶ್ ಬಾಳಿಗಾ, ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ, ಬಿಇಒ ಮಂಜುನಾಥನ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಬಲ್ಲಾಳ್ ಸಹಿತ ಪ್ರಮುಖರು ಹಾಜರಿದ್ದರು. ಸಂಸಾರ ಜೋಡುಮಾರ್ಗದ ಮೌನೇಶ ವಿಶ್ವಕರ್ಮ ನಿರ್ವಹಿಸಿದರು. ಒರಿಗಾಮಿ ಒಂದು ರೀತಿಯ ಕಾಗದದ ಕಲೆಯಾಗಿದ್ದು ಅದು ಜಪಾನ್‌ನಲ್ಲಿ ವ್ಯಾಪಕವಾಗಿ ಜನಪ್ರಿಯವಾಗಿದೆ. ‘ಕಾಗದವನ್ನು ವಿಧವಿಧ ರೀತಿಯಲ್ಲಿ ಮಡಚಿ ಅದರಲ್ಲಿ ವಿಶಿಷ್ಟವಾದ ಆಕಾರಗಳು ಮತ್ತು ಶಿಲ್ಪಗಳನ್ನು ರಚಿಸುವುದು ಈ ಒರಿಗಮಿ ಕಲೆಯ ವೈಶಿಷ್ಟ್ಯತೆ. ಈ ಒರಿಗಮಿ ಬಸ್ಸಿನಲ್ಲಿ ಗಣಿತ, ವಾಸ್ತುಶಿಲ್ಪ, ಇಂಜಿನಿಯರಿಂಗ್ ಸಹಿತ ಒರಿಗಮಿ ಕಲೆಯ ವಿವಿಧ ಸಾಧ್ಯತೆಗಳನ್ನು ತಿಳಿಸುವ ಪ್ರಯತ್ನ ನಡೆಸಲಾಗಿದೆ.

 

Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ