ಪ್ರಮುಖ ಸುದ್ದಿಗಳು

ಕರಾವಳಿ ಜಿಲ್ಲೆಗಳಲ್ಲಿ ಬಿಜೆಪಿ ಮುನ್ನಡೆ, 1 ಲಕ್ಷ ಮತಗಳ ಅಂತರದಿಂದ ಮುಂದಿರುವ ಕಾಗೇರಿ

ಜಾಹೀರಾತು

 ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯ ವಿಶ್ವೇಶ್ವರ ಹೆಗಡೆ ಕಾಗೇರಿ 106341 ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ. ಕಾಗೇರಿ ಅವರಿಗೆ 2,15,686 ಮತಗಳು ದೊರಕಿವೆ. ಕಾಂಗ್ರೆಸ್ ಪಕ್ಷದ ಡಾ. ಅಂಜಲಿ ನಿಂಬಾಳ್ಕರ್ 1,09,345 ಮತ ಪಡೆದಿದ್ದಾರೆ. ಗಣಪತಿ ಹೆಗಡೆ 1317, ರಾಜಶೇಖರ ಶಂಕರ ಹಿಂಡಲಗಿ 1550, ನಿರಂಜನ ಉದಯ ಶಿರದೇಸಾಯಿ 1260, ನಾಗರಾಜ ಶಿರಾಲಿ 826, ಚಿದಾನಂದ 469, ಕೆ.ಪಿ.ಪಾಟಿಲ 273, ಕೃಷ್ಣ ಬಳೆಗಾರ 269, ಅರವಿಂದ ಗೌಡ 224, ವಿನಾಯಕ ನಾಯಕ 395,.ಅವಿನಾಶ್ ನಾರಾಯಣ 215, ನೋಟಾ 2971

ದಕ್ಷಿಣ ಕನ್ನಡದಲ್ಲಿ ನಾಲ್ಕನೇ ಸುತ್ತಿನ ಮತ ಎಣಿಕೆ ಮುಕ್ತಾಯಗೊಂಡಾಗ ಬ್ರಿಜೇಶ್ ಚೌಟ (ಬಿಜೆಪಿ) 1,71,604 ಮತ ಗಳಿಸಿದ್ದರೆ, ಪದ್ಮರಾಜ್ ಆರ್ ಪೂಜಾರಿ (ಕಾಂಗ್ರೆಸ್) 1,38,397 ಮತ ಗಳಿಸಿದ್ದಾರೆ. ಬೃಜೇಶ್ ಚೌಟ 33,217 ಮತಗಳ ಲೀಡ್ ನಲ್ಲಿದ್ದಾರೆ. ನೋಟಾ 5,409 ಚಲಾವಣೆಯಾಗಿದೆ.

ಇನ್ನು ಉಡುಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ (ಬಿಜೆಪಿ) 1,06,233 ಮತ ಗಳಿಸಿ 41,714 ಮತಗಳ ಅಂತರದಿಂದ ಲೀಡ್ ನಲ್ಲಿದ್ದಾರೆ. ಜಯಪ್ರಕಾಶ ಹೆಗ್ಡೆ (ಕಾಂಗ್ರೆಸ್) 64,519 ಮತ ಗಳಿಸಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.