ಬಂಟ್ವಾಳ

ಮಳೆ ಬಂತು, ಮತ್ತೆ ಶುರುವಾಯ್ತು ಮಂಗಳೂರಿಗೆ ಬಸ್ ಕಾಯುವವರಿಗೆ ಸಮಸ್ಯೆಗಳ ಸರಮಾಲೆ, ಕೆಸರುಮಯವಾಗಿದೆ ಬಿ.ಸಿ.ರೋಡ್

2016ರಲ್ಲಿ ಬಂಟ್ವಾಳನ್ಯೂಸ್ ಆರಂಭಗೊಂಡ ದಿನದಿಂದ  ಬಿ.ಸಿ.ರೋಡ್ ನ ಮಂಗಳೂರಿಗೆ ತೆರಳುವ ಬಸ್ ಗಾಗಿ ಜನರು ಕಾಯುವ ಬವಣೆ ಹಾಗೂ ಸರ್ವೀಸ್ ರಸ್ತೆಯ ಅವ್ಯವಸ್ಥೆ, ನೀರು ಹರಿದುಹೋಗುವ ವ್ಯವಸ್ಥೆ ಇಲ್ಲದೇ ಇರುವ ವಿಚಾರಗಳ ಕುರಿತು ಜನಪರವಾಗಿ ಸರಣಿ ವರದಿಗಳನ್ನು ಪ್ರಕಟಿಸುತ್ತಿದೆ. ಇದೀಗ ಮತ್ತೆ  ಮಳೆ ಬಂದಿದೆ. ಮಂಗಳೂರಿಗೆ ತೆರಳುವ ಬಸ್ ನಿಲ್ದಾಣ ಪೂರ್ತಿ ಕೆಸರುಮಯವಾಗಿದೆ. ಕಂಬಳದ ಗದ್ದೆಯಂತಾಗಿದೆ ಈ ನಿಲ್ದಾಣ. 

ಬಿ.ಸಿ.ರೋಡಿನ ಈ ನಿಲ್ದಾಣಕ್ಕೆ ಇತ್ತೀಚೆಗೆ ರೋಟರಿ ಟೌನ್ ನವರು ಬಸ್ ತಂಗುದಾಣವೊಂದನ್ನು ನಿರ್ಮಿಸಿದ್ದನ್ನು ಹೊರತುಪಡಿಸಿದರೆ, ಸರಕಾರಿ ವ್ಯವಸ್ಥೆಯಿಂದ ಇದುವರೆಗೂ ಪ್ರಯಾಣಿಕರಿಗೆ ಅನುಕೂಲವಾಗುವ ಯಾವುದೇ ವ್ಯವಸ್ಥೆಗಳು ನಿರ್ಮಾಣವಾಗಿಲ್ಲ. ಬದಲಿಗೆ ನಿಲ್ಲಲೂ ಆಗದಂಥ ಕೆಸರು , ನೀರು ಹರಿದು ಹೋಗದಂಥ ವ್ಯವಸ್ಥೆಯನ್ನಷ್ಟೇ ನೋಡಬಹುದು. ಈ ಹಿಂದೆ ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾದ ವರದಿ ಲಿಂಕ್ ಇಲ್ಲಿದೆ.

ಪ್ರತಿದಿನವೂ ಸಮಸ್ಯೆ.. ಇದು ಬಿ.ಸಿ.ರೋಡ್ ನಲ್ಲಿ ಬಸ್ ಗಾಗಿ ಕಾಯುವವರ ‘ಬಯಲು’ ತಂಗುದಾಣದ ಕಥೆ, ವ್ಯಥೆ

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.