ಬಂಟ್ವಾಳ

ಅಪೂರ್ಣ ಕೆಲಸ, ಅಪಘಾತಕ್ಕೆ ಅವಕಾಶ – ಹೆದ್ದಾರಿಯಲ್ಲೇ ಹಾಕಲಾದ ಮಣ್ಣಿನ ದಿಬ್ಬದಿಂದ ಏನು ಸಮಸ್ಯೆ?

ಅಪಘಾತ ಸಂಭವಿಸಿದ ಬಳಿಕ ಕೆಂಪು ವರ್ಣದ ಕೋನ್ ಅನ್ನು ಸ್ಥಳೀಯರೇ ಇಟ್ಟಿದ್ದಾರೆ.

ಬಿ.ಸಿ.ರೋಡ್ ನ ಕೈಕಂಬ ಸಮೀಪ ಎಲ್ಲೈಸಿ ಕಚೇರಿಯ ಮುಂಭಾಗ ಹೆದ್ದಾರಿಯ ಡಿವೈಡರ್ ಪಕ್ಕದಲ್ಲಿ ಮಣ್ಣಿನ ರಾಶಿ ಇದ್ದು, ಇದಕ್ಕೆ ಡಿಕ್ಕಿ ಹೊಡೆದು ದ್ವಿಚಕ್ರ ಸವಾರರು ಬಿದ್ದ ಘಟನೆಗಳು ನಡೆದಿವೆ.

ಜಾಹೀರಾತು

ಕೆಲ ದಿನಗಳಿಂದ ಇಲ್ಲಿ ಕೆಲಸಗಳು ನಡೆಯುತ್ತಿದ್ದು, ಮಣ್ಣನ್ನು ಹಾಗೆಯೇ ಬಿಟ್ಟು ಹೋದ ಪರಿಣಾಮ, ಈ ಭಾಗದಲ್ಲಿ ಮಂಗಳೂರಿನಿಂದ ಬಿ.ಸಿ.ರೋಡಿಗೆ ಸಂಚರಿಸುವ ವಾಹನಗಳ ಸವಾರರು ಗಲಿಬಿಲಿಗೊಳ್ಳುವಂತಾಗಿದೆ.

ACCIDENT SPOT

ರಾತ್ರಿಯ ವೇಳೆಗಂತೂ ತೀರಾ ಅಪಾಯಕಾರಿಯಾಗಿ ಈ ಮಣ್ಣಿನ ದಿಬ್ಬ ಕಾಣಿಸಿಕೊಂಡಿದ್ದು, ಇದನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಇನ್ನೂ ತೆರವುಗೊಳಿಸುವ ಕಾರ್ಯವನ್ನು ಮಾಡಿಲ್ಲ. ಇತ್ತೀಚೆಗೆ ದ್ವಿಚಕ್ರವಾಹನವೊಂದು ಮಣ್ಣಿನ ದಿಬ್ಬಕ್ಕೆ ತಾಗಿ ನೆಲಕ್ಕೆ ಬಿದ್ದ ಮೇಲೆ ಸ್ಥಳೀಯರೇ ಇಲ್ಲಿ ಎಚ್ಚರಿಕೆಯ ಫಲಕವನ್ನು ಹಾಕಿದ್ದಾರೆ. ಸಂಬಂಧಪಟ್ಟವರು ಕೂಡಲೇ ಕ್ರಮ ಕೈಗೊಂಡು ಸಂಭಾವ್ಯ ಅಪಾಯವನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ವಿನಂತಿಸಿದ್ದಾರೆ.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.