ಬಂಟ್ವಾಳ

ಬಡ್ಡಕಟ್ಟೆ ಶ್ರೀ ನರಸಿಂಹ ಮುಖ್ಯಪ್ರಾಣ ದೇವಸ್ಥಾನದಲ್ಲಿ 23ರಂದು ಹನುಮಜಯಂತಿ ವಾರ್ಷಿಕ ಉತ್ಸವ

ಜಾಹೀರಾತು

ಬಂಟ್ವಾಳ ಬಡ್ಡಕಟ್ಟೆಯ ರಾಯರಚಾವಡಿಯಲ್ಲಿರುವ ಶ್ರೀ ನರಸಿಂಹ ಮುಖ್ಯಪ್ರಾಣ ದೇವಸ್ಥಾನದಲ್ಲಿ ಹನುಮಜಯಂತಿ ವಾರ್ಷಿಕ ಉತ್ಸವ ಏಪ್ರಿಲ್ 23ರಂದು ನಡೆಯಲಿದೆ ಎಂದು ಅನುವಂಶಿಕ ಕ್ಷೇತ್ರಾಧಿಕಾರಿ ಶೋಭಾ ರಾಮಪ್ರಸಾದ್ ಮತ್ತು ಉತ್ಸವ ಸಮಿತಿ ಅಧ್ಯಕ್ಷರಾದ ವಿದ್ಯಾ ತಿಳಿಸಿದ್ದಾರೆ.

ಬೆಳಗ್ಗೆ 8ರಿಂದ ನಾನಾ ಧಾರ್ಮಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, 10ಗಂಟೆಯಿಂದ ಭಕ್ತಿ ರಸಮಂಜರಿ, ಬಳಿಕ ವಿಶೇಷ ಪೂಜೆ, ಮಹಾಪೂಜೆ ನಡೆಯುವುದು. 12.30ಕ್ಕೆ ದೇವರ ಬಲಿ ಹೊರಟು ಪಲ್ಲಪೂಜೆ, ಪ್ರಸಾದ ವಿತರಣೆ ಅನ್ನಸಂತರ್ಪಣೆ ಇರಲಿದೆ. ಸಂಜೆ 6ರಿಂದ ರಂಗಪೂಜೆ, ದೀಪಾರಾಧನೆ, ದೇವರ ಬಲಿ ಉತ್ಸವ, ದರ್ಶನ ಬಲಿ ಇರಲಿದೆ. ರಾತ್ರಿ 8.30ಕ್ಕೆ ದೇವರು ವಸಂತಕಟ್ಟೆಗೆ ಹೊರಡುವುದು, ಅಷ್ಟಾವಧಾನ ಸೇವೆ ನಡೆಯಲಿದೆ. ಬಳಿಕ ವಸಂತ ಕಟ್ಟೆ ಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ಓಕುಳಿ ಉತ್ಸವ ಜಳಕದ ಬಲಿ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ರಾತ್ರಿ ನಡೆಯಲಿದ್ದು, 25ರಂದು ಕಲಶಾಭಿಷೇಕ, ವಾಯುಸ್ತುತಿ, ಪುನಶ್ಚರಣ ಹೋಮ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.