ಕಂಬಳ ಕೋಣದ ಮಾಲಕರು, ಓಟಗಾರರು, ಉದ್ಘೋಷಕರು,ಕೋಣಗಳನ್ನು ಬಿಡಿಸುವವರು, ಕೋಣಗಳನ್ನು ಓಡಿಸಲು ಬೇಕಾದ ಇತರ ಪರಿಕರಗಳನ್ನು ತಯಾರಿಸುವವರು, ಕಂಬಳ ಕೂಟಗಳಲ್ಲಿ ಭಾಗವಹಿಸಿ ಛಾಯಾಗ್ರಹಣ ಮಾಡುವ ಛಾಯಾಗ್ರಾಹಕರು, ಹಾಗೂ ಕೆಲವೊಂದು ಕೋಣಗಳ ಪರಿಚಯ ಇರಲಿದೆ
ಸಿದ್ಧಕಟ್ಟೆ: ಗುಬ್ಬಚ್ಚಿಗೂಡು ಜಾಗೃತಿ ಅಭಿಯಾನದ ಸಂಚಾಲಕಿ, ಕೃಷಿಕರು ಹಾಗೂ ಹವ್ಯಾಸಿ ಛಾಯಾಗ್ರಾಹಕಿ ಗುಬ್ಬಚ್ಚಿಗೂಡು ರಮ್ಯ ನಿತ್ಯಾನಂದ ಶೆಟ್ಟಿ ಅವರ ಚೊಚ್ಚಲ ಕೃತಿಯಾದ ಕಂಬಳ ಲೋಕ ಭಾಗ-1 ನ್ನು ಸಿದ್ಧಕಟ್ಟೆ ಶ್ರೀ ಪದ್ಮಕ್ಲೀನಿಕ್ನ ಡಾ.ಪ್ರಭಾಚಂದ್ರ, ಪಿಡಿಒ ಗಣೇಶ್ ಶೆಟ್ಟಿ ಗೋಳಿದೊಟ್ಟು, ಶಿಕ್ಷಕರಾಗಿರುವ ರಾಜೇಶ್ ರಾವ್ ನೆಲ್ಯಾಡಿ ಹಾಗೂ ಪೊಡುಂಬ ಸರೋಜಿನಿ ಸಂಜೀವ ಶೆಟ್ಟಿ ಲೋಕಾರ್ಪಣೆ ಮಾಡಿ ಶುಭ ಹಾರೈಸಿದರು.ನಿತ್ಯಾನಂದ ಶೆಟ್ಟಿ ಉಪಸ್ಥಿತರಿದ್ದರು.
ಹೆಜ್ಜೆಗಾರಿಕೆ, ಮಾತುಗಾರಿಕೆ ಮತ್ತು ಸಾತ್ವಿಕ ಅಭಿನಯದಲ್ಲಿ ಹೊಸ ಮನ್ವಂತರವನ್ನೇ ಸೃಷ್ಟಿಸಿದವರು ಗೋವಿಂದ ಭಟ್ಟರು. ಪಾತ್ರದ ಪರಕಾಯ ಪ್ರವೇಶ ಮಾಡುವುದರಲ್ಲಿ ಅವರು…