ಬಂಟ್ವಾಳ

ಅಯೋಧ್ಯೆ ರಾಮಮಂದಿರದ ಖುಷಿ: ಬಂಟ್ವಾಳದ ನೇತ್ರಾವತಿ ನದಿ ಮಧ್ಯೆ ನಡೆಯಿತು ಶ್ರೀಸತ್ಯನಾರಾಯಣ ಪೂಜೆ, ಫೊಟೋಗಳು, ವಿಡಿಯೋ ಇಲ್ಲಿವೆ

ಜಾಹೀರಾತು

ಜಾಹೀರಾತು

ಅಯೋಧ್ಯೆಯ ಶ್ರೀರಾಮಜನ್ಮಭೂಮಿಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಭಾನುವಾರ ರಾತ್ರಿ ರಾಮಭಕ್ತ, ಕರಸೇವಕ ಹಾಗೂ ಪುರಸಭೆಯ ಹಿರಿಯ ಸದಸ್ಯ ಎ.ಗೋವಿಂದ ಪ್ರಭು ಅವರ ನೇತೃತ್ವದಲ್ಲಿ ನೇತ್ರಾವತಿ ನದಿ ಮಧ್ಯೆ ಶ್ರೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮ ನಡೆಯಿತು. ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದ ಎದುರು ನಡೆದ ಈ ಕಾರ್ಯಕ್ರಮದಲ್ಲಿ ಹಣತೆಯ ಬೆಳಕನ್ನು ನದಿಯ ತೀರದಲ್ಲಿ ಜೋಡಿಸಿ, ಶ್ರೀದೇವರ ಪೂಜೆ ನಡೆಯಿತು. ನೇತ್ರಾವತಿ ನದಿಯಲ್ಲಿ ತೆಪ್ಪದ ಮಾದರಿಯನ್ನು ರಚಿಸಿ, ದೀಪಾರಾಧನೆಯ ರೂಪದಲ್ಲಿ ಪೂಜೆ ನಡೆದರೆ, ಮತ್ತೊಂದೆಡೆ ಶ್ರೀರಾಮಚಂದ್ರನ ಪ್ರತಿಕೃತಿ ಗಮನ ಸೆಳೆಯಿತು.ಪ್ರವೇಶದ್ವಾರದಲ್ಲಿ ಹನುಮನ ಪ್ರತಿಕೃತಿ ಭಕ್ತರನ್ನು ಸೆಳೆಯಿತು. ನದಿಗೆ ತೆರಳುವ ಮೆಟ್ಟಿಲಿನಲ್ಲಿ ಕುಳಿತ ಭಕ್ತರು ಪೂಜಾ ವಿಧಿ ವಿಧಾನಗಳನ್ನು ವೀಕ್ಷಿಸಿ, ಭಗವಂತನ ಕುರಿತ ಪ್ರವಚನವನ್ನು ಆಲಿಸಿ, ಪೂಜಾಸ್ಥಳಕ್ಕೆ ತೆರಳಿ, ಪ್ರಸಾದ ಸ್ವೀಕರಿಸಿ, ಫಲಾಹಾರ ಸೇವಿಸಿದರು.

ಜಾಹೀರಾತು
ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
ಜಾಹೀರಾತು
Harish Mambady

ಕಳೆದ 26 ವರ್ಷಗಳಿಂದ ಪತ್ರಕರ್ತನಾಗಿ ಹಲವು ದೈನಿಕಗಳಲ್ಲಿ ಮಂಗಳೂರು, ಮಣಿಪಾಲ ಮತ್ತು ಬಂಟ್ವಾಳಗಳಲ್ಲಿ ಕೆಲಸ ಮಾಡಿರುವ ಅನುಭವ ಇರುವ ಹರೀಶ ಮಾಂಬಾಡಿ, 2016ರಲ್ಲಿ www.bantwalnews.com ಆರಂಭಿಸಿದ್ದು, ಇದರ ಸಂಪಾದಕರೂ ಆಗಿದ್ದಾರೆ.