ಬಂಟ್ವಾಳ

ನಂದನಹಿತ್ತಿಲು ದೈವಸ್ಥಾನ: ಧ್ವಜಸ್ತಂಭ ತೈಲಾಧಿವಾಸ ಪೂರ್ವಭಾವಿ ಸಭೆ

ನಂದನಹಿತ್ತಿಲು  ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನಕ್ಕೆ ನೂತನ ದ್ವಜಸ್ತಂಭ ತರುವ ಬಗ್ಗೆ ಹಾಗೂ ಧ್ಬಜಸ್ತಂಭದ ತೈಲಾಧಿವಾಸ ಕಾರ್ಯಕ್ರಮದ ಬಗ್ಗೆ ಪೂರ್ವಭಾವಿ ಸಭೆ ದೈವಸ್ಥಾನದಲ್ಲಿ ‌ಜರಗಿತು.

ಜಾಹೀರಾತು

ಆಡಳಿತ ಮಂಡಳಿ ಅಧ್ಯಕ್ಷ ಗಣೇಶ್ ಸುವರ್ಣ ನೇತೃತ್ವದಲ್ಲಿ ಸಭೆ ನಡೆಯಿತು.  ಈ ಸಂದರ್ಭ ಮಾತನಾಡಿದ ಅವರು ಕೊಡಿಮರವನ್ನು ಗ್ರಾಮದ ಯುವಕರು ಹೆಗಲಿಗೆ ಹೆಗಲು ಕೊಟ್ಟು ಹೊತ್ತುಕೊಂಡು ಮೆರವಣಿಗೆ ಮೂಲಕ ಬಂಟ್ವಾಳ ‌ಪೇಟೆಯಲ್ಲಿ ದೇವಸ್ಥಾನಕ್ಕೆ ತರುವ ಯೋಚನೆ ಮಾಡಲಾಗಿದೆ. ಇದರ ಜೊತೆಗೆ ವಿವಿಧ ಭಜನೆಯ ತಂಡಗಳು ಜೊತೆಯಾಗಲಿದೆ ಎಂದು ಅವರು ತಿಳಿಸಿದರು. ಕೊಡಿಮರವನ್ನು ಹೊತ್ತಕೊಂಡು ತರುವುದಕ್ಕಾಗಿ ಗ್ರಾಮದ ಸುಮಾರು 40 ಜನರ ಯುವಕರ ತಂಡ ಸಿದ್ದವಾಗಿದ್ದು, ಶುದ್ಧಾಚಾರದಲ್ಲಿ ಕಳಸ ನೀರು ಸ್ನಾನ ಮಾಡಿ ಬಳಿಕ ಕೊಡಿಮರಕ್ಕೆ ಹೆಗಲು ಕೊಡುತ್ತೇವೆ ಎಂದು ಮಾತು ಕೊಟ್ಟಿದ್ದಾರೆ ಎಂದು ಅವರು ತಿಳಿಸಿದರು.

ಕೊಡಿಮರದ ಕೆತ್ತನೆಯ ಕೆಲಸ ಅಂತಿಮ ಹಂತದಲ್ಲಿದ್ದು, ಕೊಡಿಮರವನ್ನು ತರುವ ಕಾರ್ಯಕ್ರಮವನ್ನು ಯಾವರೀತಿ ಮಾಡುವುದು ಮತ್ತು ಪೂರಕ ಕೆಲಸವನ್ನು ಯಾವ ರೀತಿ ಮಾಡುವುದು ಎಂಬ ವಿಚಾರದ ಬಗ್ಗೆ ಚರ್ಚೆ ನಡೆಸಿದರು.

ದೈವಸ್ಥಾನಕ್ಕೆ ತಂದ ಬಳಿಕ ಕೊಡಿಮರದ ತೈಲಾಧಿವಾಸ ಬಗ್ಗೆಯೂ ಚರ್ಚಿಸಲಾಯಿತು. ಮಾ.30 ಕ್ಕೆ ಕೊಡಿಮರದ ಪ್ರತಿಷ್ಟಾಪನೆ ಮಾಡಲಿರುವುದರಿಂದ ಅದಕ್ಕೆ ಪೂರ್ವಭಾವಿಯಾಗಿ ಯಶಸ್ವಿಯಾಗಿ ಕಾರ್ಯಕ್ರಮ ಆಯೋಜಿಸಲು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಚರ್ಚಿಸಿ ಫೆ.4 ರಂದು ಕೊಡಿಮರವನ್ನು ದೈವಸ್ಥಾನಕ್ಕೆ ತರುವ ಬಗ್ಗೆ ದಿನ ನಿಗದಿಮಾಡಲಾಗಿದೆ. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಮನೆತನದ ಸುಧೀರ್ ಬಾಳಿಗ, ಪ್ರಮುಖರಾದ ರಾಮ್ ದಾಸ ಬಂಟ್ವಾಳ, ಅವಿನಾಶ್ ಕಾಮತ್, ಗಿರಿಪ್ರಕಾಶ್ ತಂತ್ರಿ, ಸಂಜೀವ ಪೂಜಾರಿ, ವಿಶ್ವನಾಥ ಪೂಜಾರಿ, ಲೋಕನಾಥ ಬಂಗೇರ,ವೆಂಕಪ್ಪ ಪೂಜಾರಿ,  ಲೋಕೇಶ್ ಪೂಜಾರಿ,ಬಾಬು ಶೆಟ್ಟಿ, ಪ್ರವೀಣ್ ಶೆಣೈ ,ಕೊಡಿಮರದ ಕೆತ್ತನೆ ಕೆಲಸಗಾರ ಪ್ರವೀಣ್ ,ಮಹಾಬಲ ಬಂಟ್ವಾಳ ಮತ್ತಿತರ ಊರಿನ ಪ್ರಮುಖರು ಹಾಜರಿದ್ದರು.

ಜಾಹೀರಾತು
Harish Mambady

ಸುಮಾರು 27 ವರ್ಷಗಳ ಕಾಲ ಮುದ್ರಣ ಮಾಧ್ಯಮ ಹಾಗೂ ಡಿಜಿಟಲ್ ಮಾಧ್ಯಮದಲ್ಲಿ ಅನುಭವವಿರುವ ಪತ್ರಕರ್ತ ಹರೀಶ ಮಾಂಬಾಡಿ 2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಕುರಿತು ದೈನಂದಿನ ಸುದ್ದಿ ನೀಡುವ ಮೊದಲ ವೆಬ್ ಪತ್ರಿಕೆ ಇದು. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಪ್ರಸ್ತುತ 10ನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು. ವಿ.ಸೂ: ಬಂಟ್ವಾಳನ್ಯೂಸ್ ನಲ್ಲಿ ಪ್ರಕಟವಾಗುವ ಲೇಖನ ಹಾಗೂ ಜಾಹೀರಾತುಗಳಿಗೆ ಸಂಬಂಧಪಟ್ಟವರೇ ಹೊಣೆಗಾರರಾಗುತ್ತಾರೆ. ಅದಕ್ಕೂ ಬಂಟ್ವಾಳನ್ಯೂಸ್ ಗೂ ಸಂಬಂಧವಿರುವುದಿಲ್ಲ. --- ಹರೀಶ ಮಾಂಬಾಡಿ, ಸಂಪಾದಕNOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.

Recent Posts

ಮಂಗಳೂರು ಕಡಲ ತೀರ ʼಕಡಲ ಪವನ ಶಕ್ತಿ ಉತ್ಪಾದನಾ ವಲಯʼವಾಗಿ ಅಭಿವೃದ್ಧಿಪಡಿಸಲು ಕೇಂದ್ರಕ್ಕೆ ಮನವಿ

ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)

2 hours ago