ಕಲ್ಲಡ್ಕ

ವೀರಕಂಭ: ಓಂಕಾರ್ ಫ್ರೆಂಡ್ಸ್ ವತಿಯಿಂದ ಪ್ರಯಾಣಿಕರ ತಂಗುದಾಣ ಲೋಕಾರ್ಪಣೆ

ವೀರಕಂಭ ಗ್ರಾಮದ ಓಂಕಾರ್ ಫ್ರೆಂಡ್ಸ್ ಸಂಘಟನೆಯವತಿಯಿಂದ ನಿರ್ಮಿಸಿದ ತಂಗುದಾಣದ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು. ವೀರಕಂಭ ಅಂಚೆ ಕಚೇರಿಯ ಎದುರು  ನಿರ್ಮಿಸಲ್ಪಟ್ಟ ತಂಗುದಾಣದ ಲೋಕಾರ್ಪಣೆಯನ್ನು ವೀರಕಂಭ  ಗ್ರಾಮ ಪಂಚಾಯತಿನ ಉಪಾಧ್ಯಕ್ಷರಾದ ಜನಾರ್ಧನ ಪೂಜಾರಿ ನೆರವೇರಿಸಿದರು. ಈ ಹಿಂದೆ ಇದ್ದ ತಂಗುದಾನವು ರಸ್ತೆ ಅಗಲವಾಗುವ ಸಂದರ್ಭ ತೆರವಾಗಿದ್ದು ಶಾಲಾ ಮಕ್ಕಳು,  ಸಾರ್ವಜನಿಕರು, ಬಿಸಿಲು ಮಳೆಗೆ ರಸ್ತೆ ಬದಿಯಲ್ಲಿ ನಿಂತಿರುವುದನ್ನು ಕಂಡು ಸ್ಥಳೀಯ ಸಂಘಟನೆಯಾದ ಓಂಕಾರ್ ಫ್ರೆಂಡ್ಸ್ ತಂಗುದಾನವನ್ನು ನಿರ್ಮಿಸಿ ಕೊಟ್ಟಿದೆ. ಈ ಸಂದರ್ಭ  ಮಾಜಿ ಗ್ರಾಮ ಪಂಚಾಯತ್  ಸದಸ್ಯ ರಾಮಚಂದ್ರ ಪ್ರಭು, ಯುವಶಕ್ತಿ ಫ್ರೆಂಡ್ಸ್ ನ ಅಧ್ಯಕ್ಷ ಜಗದೀಶ್ ಹಾಗೂ ಸದಸ್ಯರು,ಓಂಕಾರ್ ಫ್ರೆಂಡ್ಸ್ ಸಂಘಟನೆಯ ಅಧ್ಯಕ್ಷ ಕೀರ್ತನ್, ಮಾಜಿ ಅಧ್ಯಕ್ಷ ವಾಸು ನಾಯ್ಕ್, ಕಾರ್ಯದರ್ಶಿ ಪ್ರವೀಣ್, ಹಾಗೂ ಸದಸ್ಯರು ಉಪಸ್ಥಿತರಿದ್ದರು

ಬಂಟ್ವಾಳ್ ನ್ಯೂಸ್. ಕಾಂ , ಈ ನ್ಯೂಸ್ ಲಿಂಕ್ ಚಂದದಾರರಾಗಬೇಕೆ ಇಲ್ಲಿ ಕ್ಲಿಕ್ ಮಾಡಿ. ನೀವು ಈಗಾಗಲೇ ಚಂದದಾರರಾಗಿದ್ದರೆ, ಮತ್ತೆ ಕ್ಲಿಕ್ ಮಾಡಬೇಕಾಗಿಲ್ಲ ವಾಟ್ಸಪ್ ಗ್ರೂಪಿಗೆ ಸೇರಬೇಕಾಗಿಲ್ಲ
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಇಪ್ಪತ್ತೈದು ಲಕ್ಷಕ್ಕೂ ಅಧಿಕ ಮಂದಿ ಓದಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಎಂಟನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  ಅಕೌಂಟ್ ನಂಬ್ರ ಹೀಗಿದೆ. For Online Transaction: Account Name:  Harish M G, Bank: Karnataka bank  Account No: 0712500100982501  IFSC Code: KARB0000071  ಗೂಗಲ್ ಪೇ ಮಾಡುವುದಿದ್ದರೆ, Gpay: 9448548127 - ಹರೀಶ ಮಾಂಬಾಡಿ, ಸಂಪಾದಕ