ಬಂಟ್ವಾಳ

ಅಶಕ್ತರಿಗೆ ನೆರವಾಗಲು ಅವತಾರ್ ಸಿನಿಮಾ ರೀತಿ ವೇಷ ಹಾಕಿದ ಸರಪಾಡಿಯ ಯುವಕ

BANTWALA ಸರಪಾಡಿ (SARAPADY) ಗ್ರಾಮದ ನೀರೊಲ್ಬೆ ನಿವಾಸಿ ದೇವದಾಸ್ ನಾಯ್ಕ್ ಅವರು ಕಳೆದ ಮೂರು ವರ್ಷಗಳಲ್ಲಿ ವೇಷ ಹಾಕಿ ಸಂಗ್ರಹವಾದ ಮೊತ್ತವನ್ನು ಅಶಕ್ತರಿಗೆ ಹಂಚಿದ್ದು, ಈ ಬಾರಿ ನಾಲ್ಕನೇ ವರ್ಷದಲ್ಲಿ ಇಂಗ್ಲೀಷ್ ಚಿತ್ರ ಅವತಾರ್ 4 ರೀತಿ ವೇಷ ಹಾಕಿ ಮೂವರು ಅಶಕ್ತರಿಗೆ ನೆರವಾಗಲು ಸುತ್ತಾಟ ಆರಂಭಿಸಿದ್ದಾರೆ.

ಅ.೧೮ರಂದು ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಸುತ್ತಾಟ ಆರಂಭಿಸಿದ್ದು, ವಿಜಯ ದಶಮಿವರೆಗೆ ವೇಷ ಹಾಕಿ ಸಾಧ್ಯವಾದಷ್ಟು ಮೊತ್ತವನ್ನು ಸಂಗ್ರಹಿಸುವ ಗುರಿ ಹೊಂದಿದ್ದಾರೆ. ಮಣಿನಾಲ್ಕೂರು ಗ್ರಾಮದ ಕ್ಯಾನ್ಸರ್ ಪೀಡಿತರು, ಬಡ ಕುಟುಂಬದ ಯುವತಿಯ ಶಿಕ್ಷಣ, ಕೋಮಾದಲ್ಲಿರುವ ಬೆಳ್ತಂಗಡಿಯ ವ್ಯಕ್ತಿಯೊಬ್ಬರಿಗೆ ಸಂಗ್ರಹ ಮೊತ್ತವನ್ನು ನೀಡುವುದಾಗಿ ತಿಳಿಸಿದ್ದಾರೆ.

ಕಳೆದ ಬಾರಿ ಪೂರ್ತಿ ನವರಾತ್ರಿಯ ದಿನಗಳಲ್ಲಿ ವೇಷ ಹಾಕಿ ಸುಮಾರು 57 ಸಾವಿರ ಮೊತ್ತವನ್ನು ಸಂಗ್ರಹಿಸಿ ಎರಡು ಅಶಕ್ತ ಕುಟುಂಬಗಳಿಗೆ ನೀಡಿ ಉಳಿದ ಮೊತ್ತವನ್ನು ಸರಪಾಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ನೀಡಿದ್ದರು. ತನ್ನ ವೇಷಕ್ಕೆ ಹೋಲುವ ರೀತಿಯಲ್ಲಿ BIKE ಬೈಕ್ ಕೂಡ ವಿನ್ಯಾಸಗೊಳಿಸಿ ಅದರ ಮೂಲಕ ಸುತ್ತಾಟ ನಡೆಸುತ್ತಾರೆ.
ಜಾಹೀರಾತು
ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.