ಜಿಲ್ಲಾ ಸುದ್ದಿ

ಕಾಂಗ್ರೆಸ್ ಮೊದಲ ಪಟ್ಟಿ ರಿಲೀಸ್: ಬಂಟ್ವಾಳದಿಂದ ರಮಾನಾಥ ರೈ ಸ್ಪರ್ಧೆ ಫಿಕ್ಸ್

ಜಾಹೀರಾತು

ಮೇನಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಗೆ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್‌ ಶನಿವಾರ ಬಿಡುಗಡೆ ಮಾಡಿದೆ. ಸಾಕಷ್ಟು ಕುತೂಹಲ ಕೆರಳಿಸಿದ್ದ ಸಿದ್ದರಾಮಯ್ಯ ಕ್ಷೇತ್ರದ ಗೊಂದಲಕ್ಕೆ ಈ ಪಟ್ಟಿ ಪೂರ್ಣವಿರಾಮ ಹಾಕಿದ್ದು, ಮಾಜಿ ಮುಖ್ಯಮಂತ್ರಿ ತಮ್ಮ ಮಗ ಯತೀಂದ್ರ ಸಿದ್ದರಾಮಯ್ಯ ಪ್ರತಿನಿಧಿಸುತ್ತಿರುವ ವರುಣಾದಿಂದಲೇ ಸ್ಪರ್ಧೆ ಮಾಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಂಟ್ವಾಳದಿಂದ ರಮಾನಾಥ ರೈ ಮತ್ತೊಮ್ಮೆ ಸ್ಪರ್ಧೆಗಿಳಿಯುವುದು ಫಿಕ್ಸ್ ಆಗಿದೆ. ಮಂಗಳೂರು ಕ್ಷೇತ್ರದಿಂದ ಯು.ಟಿ.ಖಾದರ್, ಮೂಡುಬಿದಿರೆಯಿಂದ ಮಿಥುನ್ ರೈ, ಬೆಳ್ತಂಗಡಿಯಿಂದ ರಕ್ಷಿತ್ ಶಿವರಾಮ್, ಸುಳ್ಯದಲ್ಲಿ ಕೃಷ್ಣಪ್ಪ ಸ್ಪರ್ಧೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿದೆ.  ಅಭ್ಯರ್ಥಿಗಳು ಇವರು.

1. ಯಮಕನಮರಡಿ : ಸತೀಶ್‌ ಜಾರಕಿಹೊಳಿ 2. ಬೆಳಗಾವಿ ಗ್ರಾಮೀಣ : ಲಕ್ಷ್ಮೀ ಹೆಬ್ಬಾಳ್ಕರ್ 3. ಖಾನಾಪುರ : ಅಂಜಲಿ ನಿಂಬಾಳ್ಕರ್‌ 4. ಬಬಲೇಶ್ವರ : ಎಂ. ಬಿ. ಪಾಟೀಲ 5. ಅಳಂದ : ಬಿ. ಆರ್.‌ ಪಾಟೀಲ 6. ಭಾಲ್ಕಿ : ಈಶ್ವರ ಖಂಡ್ರೆ 7. ಚಿತ್ತಾಪುರ : ಪ್ರಿಯಾಂಕ ಖರ್ಗೆ 8. ಬೀದರ್‌ : ರಹೀಂಖಾನ್‌ 9.ಕಾಗವಾಡ: ಭರಮಗೌಡ ಎ. ಕಗೆ 10.ಕುಡಚಿ: ಮಹೇಂದ್ರ ಕೆ ತಮ್ಮನ್ನವರ್ 11.ಹುಕ್ಕೇರಿ: ಎಬಿ ಪಾಟೀಲ್ 12.ಬೈಲಹೊಂಗಲ: ಮಹಾಂತೇಶ್ ಶಿವಾನಂದ ಕೌಜಲಗಿ 13.ರಾಮದುರ್ಗ: ಅಶೋಕ್ ಎಂ ಪಟ್ಟಣ 14.ಜಮಖಂಡಿ: ಅನಂದ ಸಿದ್ದು ನ್ಯಾಮಗೌಡ 15.ಹುನಗುಂದ: ವಿಜಯನಾಂದ ಕಾಶಪ್ಪನವರ್ 16.ಮುದ್ದೇಬಿಹಾಳ: ಸಿಎಸ್​ ನಾಡಗೌಡ 17.ಬಸವನ ಬಾಗೇವಾಡಿ: ಶಿವಾನಂದ ಪಾಟೀಲ್ 18.ಇಂಡಿ: ಯಶವಂತರಾಯಗೌಡ ಪಾಟೀಲ್ 19.ಜೇವರ್ಗಿ: ಅಜಯ್ ಧರಂಸಿಂಗ್ 20.ಸುರಪುರ: ರಾಜಾವೆಂಕಟಪ್ಪ ನಾಯಕ್ 21.ಶಹಪುರ: ಶರಣಬಸಪ್ಪ ಗೌಡ 22.ಸೇಡಂ: ಶಂಕರಪ್ರಕಾಶ್ ಪಾಟೀಲ್ 23.ಚಿಂಚೊಳ್ಳಿ: ಸುಭಾಶ್ ವಿ ರಾಥೋಡ್ 24.ಗುಲ್ಬರ್ಗಾ ಉತ್ತರ: ಖನೀಜ ಫಾತಿಮಾ 25ಹುಮ್ನಾಬಾದ್: ರಾಜಶೇಖರ್ ಬಿ ಪಾಟೀಲ್ 26.ಬೀದರ್ ದಕ್ಷಿಣ: ಅಶೋಕ್ ಖೇಣಿ 27.ರಾಯಚೂರು ಗ್ರಾಮೀಣ: ಬಸನಗೌಡ ದದ್ದಲ್28.ವರುಣಾ: ಸಿದ್ದರಾಮಯ್ಯ 29.ದಾವಣಗೆರೆ ದಕ್ಷಿಣ: ಶಾಮನೂರು ಶಿವಶಂಕ್ರಪ್ಪ 30.ಕನಕಪುರ: ಡಿ.ಕೆ. ಶಿವಕುಮಾರ್​31.ಚಿಕ್ಕೋಡಿ,ಸದಲಗಾ: ಗಣೇಶ ಹುಕ್ಕೇರಿ 32.ಕುಡಚಿ: ಮಹೇಂದ್ರ ಕೆ ತಮ್ಮಣ್ಣವರ್​33.ಗಾಂಧಿನಗರ (ಬೆಂಗಳೂರು): ದಿನೇಶ್​ ಗುಂಡುರಾವ್​34.ಚಾಮರಾಜಪೇಟೆ: ಜಮೀರ್ ಅಹ್ಮದ್ ​​35.ಬಿಟಿಎಂಲೇಔಟ್​: ರಾಮಲಿಂಗಾರೆಡ್ಡಿ 36.ಜಯನಗರ: ಸೌಮ್ಯ ರೆಡ್ಡಿ 37.ಮಸ್ಕಿ: ಬಸನಗೌಡ ತುರ್ವಿಹಾಳ 38.ಕುಷ್ಟಗಿ: ಅಮರೇಗೌಡ ಪಾಟೀಲ್ ಬಯ್ಯಾಪುರ 39.ಯಲಬುರ್ಗ: ಬಸವರಾಜ್ ರಾಯರೆಡ್ಡಿ 40.ಕೊಪ್ಪಳ: ಕೆ.ರಾಘವೇಂದ್ರ 41.ಗದಗ: ಹೆಚ್ ಕೆ ಪಾಟೀಲ್ 42.ರೋಣ: ಜಿಎಸ್ ಪಾಟೀಲ್ 43.ಹುಬ್ಬಳ್ಳಿ-ಧಾರವಾಡ (ಪೂರ್ವ): ಪ್ರಸಾದ್ ಅಬ್ಬಯ್ಯ 44.ಹಳಿಯಾಳ: ಆರ್ ವಿ ದೇಶಪಾಂಡೆ 45.ಕಾರವಾರ: ಸತೀಶ್ ಸೈಲ್ 46.ಭಟ್ಕಳ: ಎಂ ಸುಬ್ಬವೈದ್ಯ 47.ಹಾನಗಲ್: ಶ್ರೀನಿವಾಸ್ ಮಾನೆ 48.ಹಾವೇರಿ: ರುದ್ರಪ್ಪ ಲಮಾಣಿ 49.ಬ್ಯಾಡಗಿ: ಬಸವರಾಜ್ ಎನ್ ಶಿವಣ್ಣನ್ನರ್ 50.ಹಿರೇಕೆರೂರು: ಯುಬಿ ಬಣಕರ್ 51.ರಾಣೇಬೆನ್ನೂರು: ಪ್ರಕಾಶ್ ಕೆ ಕೋಳಿವಾಡ 52.ಹಡಗಲಿ: ಪಿಟಿ ಪರಮೇಶ್ವರ್ ನಾಯಕ್ 53.ಹಗರಿಬೊಮ್ಮನಹಳ್ಳಿ: ಭೀಮಾ ನಾಯಕ್​54ವಿಜಯನಗರ: ಹೆಚ್ ಆರ್ ಗವಿಯಪ್ಪ 55.ಕಂಪ್ಲಿ: ಜೆಎನ್ ಗಣೇಶ್ 56.ಬಳ್ಳಾರಿ: ಬಿ ನಾಗೇಂದ್ರ 57.ಸಂಡೂರು: ಇ ತುಕಾರಾಂ 58.ಚಳ್ಳಕೆರೆ: ಟಿ ರಘುಮೂರ್ತಿ 59.ಹಿರಿಯೂರು: ಡಿ ಸುಧಾಕರ್ 60.ಹೊಸದುರ್ಗ: ಗೋವಿಂದಪ್ಪ ಬಿ.ಜಿ 61.ದಾವಣಗೆರೆ ಉತ್ತರ: ಎಸ್ ಎಸ್ ಮಲ್ಲಿಕಾರ್ಜುನ್ 62. ಮಾಯಕೊಂಡ: ಕೆಎಸ್ ಬಸವರಾಜು 63.ಭದ್ರಾವತಿ: ಸಂಗಮೇಶ್ವರ್ ಬಿಕೆ 64.ಸೊರಬ: ಮಧು ಬಂಗಾರಪ್ಪ 65.ಸಾಗರ: ಗೋಪಾಲಕೃಷ್ಣ 66.ಬೈಂದೂರು: ಕೆ ಗೋಪಾಲ ಪೂಜಾರಿ 67.ಕುಂದಾಪುರ: ದಿನೇಶ್ ಹೆಗಡೆ 68.ಕಾಪು: ವಿನಯ ಕುಮಾರ್ ಸೊರಕೆ 69.ಮಾಗಡಿ:ಎಚ್​.ಸಿ. ಬಾಲಕೃಷ್ಣ 70.ರಾಮನಗರ: ಇಕ್ಬಾಲ್ ಹುಸೈನ್ ಎಚ್​.ಎ 71.ಮಳವಳ್ಳಿ : ಪಿ.ಎಂ. ನರೇಂದ್ರಸ್ವಾಮಿ 72.ಶ್ರೀರಂಗಪಟ್ಟಣ :ಎ.ಬಿ. ರಮೇಶ್ ಬಂಡಿಸಿದ್ದೇಗೌಡ 73.ನಾಗಮಂಗಲ:ಎನ್. ಚೆಲುವರಾಯಸ್ವಾಮಿ 74.ಹೊಳೆನರಸೀಪುರ: ಶ್ರೇಯಸ್ ಎಂ.ಪಟೇಲ್ 75.ಸಕಲೇಶಪುರ(ಎಸ್​ಸಿ): ಮುರಳಿ ಮೋಹನ್ 76.ಬೆಳ್ತಂಗಡಿ: ರಕ್ಷಿತ್ ಶಿವರಾಮ್ 77.ಮೂಡಬಿದಿರೆ: ಮಿಥುನ್ ಎಮ್. ರೈ. 78.ಮಂಗಳೂರು: ಯು.ಟಿ. ಅಬ್ದುಲ್ ಖಾದರ್ ಅಲಿ ಫರೀದ್ 79.ಬಂಟ್ವಾಳ: ರಮನಾಥ್ ರೈ ಬಿ 80.ಸುಳ್ಯ: ಕೃಷ್ಣಪ್ಪ ಜಿ 81.ಬವಿರಾಜಪೇಟೆ: ಎ.ಎಸ್ ಪೊನ್ನಣ್ಣ 82.ಪಿರಿಯಾಪಟ್ಟಣ: ಕೆ. ವೆಂಕಟೇಶ್ 83.ಕೃಷ್ಣರಾಜನಗರ:ಡಿ. ರವಿಶಂಕರ್ 84.ಹುಣಸೂರು: ಎಚ್​.ಪಿ ಮಂಜುನಾಥ್ 85.ಎಚ್​ಡಿ ಕೋಟೆ-ಎಸ್​ಟಿ: ಅನಿಲ್ ಕುಮಾರ್. ಸಿ 86.ನಂಜನಗೂಡು:ದರ್ಶನ್ ಧ್ರುವನಾರಾಯಣ 87.ನರಸಿಂಹರಾಜ: ತನ್ವೀರ್ ಸೇಠ್ 88.ಶೃಂಗೇರಿ: ಟಿಡಿ ರಾಜೇಗೌಡ 89.ಚಿಕ್ಕನಾಯಕನಹಳ್ಳಿ: ಕಿರಣ್ ಕುಮಾರ್ 90.ತಿಪಟೂರು: ಕೆ ಷಡಕ್ಷರಿ 91.ತುರುವೆಕೆರೆ: ಕಾಂತರಾಜ್ ಬಿಎಂ 92.ಕುಣಿಗಲ್: ಹೆಚ್​ ಡಿ ರಂಗನಾಥ್ 93.ಕೊರಟಗೆರೆ: ಜಿ ಪರಮೇಶ್ವರ್ 94.ಶಿರಾ: ಟಿಬಿ ಜಯಚಂದ್ರ 95.ಪಾವಗಡ: ಹೆಚ್​ ವಿ ವೆಂಕಟೇಶ್ 96.ಮಧುಗಿರಿ: ಕೆಎನ್ ರಾಜಣ್ಣ 97.ಗೌರಿಬಿದನೂರು: ಶಿವಶಂಕರ್ ರೆಡ್ಡಿ 98.ಬಾಗೇಪಲ್ಲಿ: ಎಸ್ ಎನ್ ಸುಬ್ಬಾರೆಡ್ಡಿ 99.ಚಿಂತಾಮಣಿ: ಎಂ ಸಿ ಸುಧಾಕರ್ 100.ಶ್ರೀನಿವಾಸಪುರ: ಕೆಆರ್ ರಮೇಶ್ ಕುಮಾರ್ 101.ಕೆಜಿಎಫ್​: ರೂಪಕಲಾ ಎಂ 102.ಬಂಗಾರಪೇಟೆ: ಎಸ್ ಎನ್ ನಾರಾಯಣಸ್ವಾಮಿ 103.ಮಾಲೂರು: ಕೆವೈ ನಂಜೇಗೌಡ 104.ಬ್ಯಾಟರಾಯನಪುರ: ಕೃಷ್ಣ ಬೈರೇಗೌಡ 105.ಆರ್ ಆರ್ ನಗರ: ಕುಸುಮಾ 106.ಮಲ್ಲೇಶ್ವರಂ: ಅನೂಪ್ ಅಯ್ಯಂಗಾರ್ 107.ಹೆಬ್ಬಾಳ : ಸುರೇಶ್ ಬಿ.ಎಸ್ 108.ಸರ್ವಜ್ಞ ನಗರ: ಕೆ. ಜೆ. ಜಾರ್ಜ್ 109.ಶಿವಾಜಿನಗರ: ರಿಜ್ವಾನ್ ಆರ್ಷದ್ 110.ಶಾಂತಿನಗರ: ಎನ್. ಎ. ಹ್ಯಾರಿಸ್ 111.ರಾಜಾಜಿನಗರ: ಪುಟ್ಟಣ್ಣ 112.ಗೋವಿಂದರಾಜ ನಗರ:ಪ್ರಿಯಾಕೃಷ್ಣಾ 113.ವಿಜಯ ನಗರ: ಎಂ. ಕೃಷ್ಣಪ್ಪ 114.ಬಸವನಗುಡಿ:ಯು.ಬಿ. ವೆಂಕಟೇಶ್ 115.ಮಹದೇವಪುರ: ನಾಗೇಶ್ ಟಿ 116.ಆನೇಕಲ್: ಬಿ ಶಿವಣ್ಣ 117.ಹೊಸಕೋಟೆ: ಶರತ್ ಕುಮಾರ್ ಬಚ್ಚೇಗೌಡ 118. ದೇವನಹಳ್ಳಿ : ಕೆ. ಎಚ್. ಮುನಿಯಪ್ಪ 119.ದೊಡ್ಡಬಳ್ಳಾಪುರ: ಟಿ. ವೆಂಕಟರಾಮಯ್ಯ 120.ನೆಲಮಂಗಲ: ಶ್ರೀನಿವಾಸಯ್ಯ ಎನ್

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.