ವಿಟ್ಲ

ಒಡಿಯೂರಿನಲ್ಲಿ ಸಾಮೂಹಿಕ ಶನೈಶ್ಚರ ಪೂಜೆ

ಜಾಹೀರಾತು

ಬಂಟ್ವಾಳ: ಶನಿಯ ಬಗ್ಗೆ ಭಯಬೇಡ. ಶನಿಶ್ಚರನ ಆರಾಧನೆಯಿಂದ ಶನಿಗ್ರಹಾಚಾರ ದೂರವಾದೀತು. ಶನಿಯ ಪರಿಹಾರಕ್ಕಾಗಿ ಆರಾಧನೆ ಅಗತ್ಯ. ನಮ್ಮೊಳಗಿನ ಶತ್ರುವನ್ನು ಮೆಟ್ಟಿನಿಲ್ಲುವ ಕೆಲಸವಾಗಬೇಕು. ನಮ್ಮೊಡಲಲ್ಲಿ ರಾಗ ಧ್ವೇಷಗಳು   ದೂರವಾಗಿ ಪ್ರೀತಿ ಭಾವನೆಯನ್ನು ತುಂಬಿಕೊಳ್ಳಬೇಕು ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಒಡಿಯೂರು ಸಂಸ್ಥಾನದಲ್ಲಿ ಶನಿಪ್ರದೋಷದ ಪ್ರಯುಕ್ತ ನಡೆದ ಸಾಮೂಹಿಕ ಶನೈಶ್ಚರ ಪೂಜೆಯ ಬಳಿಕ ಆಶೀರ್ವಚನ ನೀಡಿದರು. ಈಗಿನ ಕಾಲದಲ್ಲಿ ಆನ್ಲೈನ್ ಹಾಗು ಆಫ್ಲೈನ್ ನ ಬಗ್ಗೆ  ಜಾಗೃತರಾಗುವ ಜೊತೆಗೆ  ನಮ್ಮ ಲೈಫ್ಲೈನ್ ಬಗ್ಗೆ  ಎಚ್ಚರದಿಂದಿರಬೇಕು. ಸಂಸ್ಕಾರ ಕೊಡುವ ಕೆಲಸವನ್ನು ನಮ್ಮ ಶ್ರದ್ಧಾಕೇಂದ್ರಗಳು ಮಾಡುತ್ತಿದೆ. ನಾವೆಲ್ಲರೂ  ಜಾಗೃತರಾಗಬೇಕಾದ ಕಾಲಘಟ್ಟದಲ್ಲಿದ್ದೇವೆ.  ಹುಟ್ಟು ಮತ್ತು ಸಾವು ಎನ್ನುವುದು ಮನುಷ್ಯ ಜೀವನದಲ್ಲಿ ಇದ್ದೇ ಇದೆ.  ನಮ್ಮ ಜೀವನವನ್ನು ಸಾರ್ಥಕ್ಯವಾಗಿ ಬಳಸಿಕೊಳ್ಳುವ ಮನಸ್ಸು ನಮ್ಮದಾಗಬೇಕು. ಎಂದರು. ವೇದಮೂರ್ತಿ ಚಂದ್ರಶೇಖರ ಉಪಾಧ್ಯಯರವರ ಪೌರೋಹಿತ್ಯದಲ್ಲಿ ಶನೈಶ್ಚರ ಪೂಜೆ ನಡೆಯಿತು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.