ಬಂಟ್ವಾಳ: ಬರಿಮಾರು ಮಹಾಮ್ಮಾಯ ದೇವಸ್ಥಾನದಲ್ಲಿ ಶತಕಲಶಾಭಿಷೇಕ, ಸಾನಿಧ್ಯ ಹವನ ಹಾಗೂ ಸಹಸ್ರ ಹೂವಿನ ಪೂಜೆ ಪಂಡಿತ್ ಕಾಶಿನಾಥ್ ಆಚಾರ್ಯರ ನೇತೃತ್ವದ ವೈದಿಕ ವೃಂದದವರ ಪಾಲುದಾರಿಕೆಯೊಂದಿಗೆ ನಡೆಯಿತು. ಈ ಸಂದರ್ಭ ಆನುವಂಶಿಕ ಮೊಕ್ತೇಸರ ರಾಕೇಶ ಪ್ರಭು ಮತ್ತಿತರರು ಉಪಸ್ಥಿತರಿದ್ದರು. ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ಮಹಾಪೂಜೆಯ ಬಳಿಕ ಶ್ರೀ ಮಹಾಮ್ಮಾಯ ಅಮ್ಮನವರ ಗಂಧ ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆಯ ಕಾರ್ಯಕ್ರಮವು ನಡೆದವು.
ನಿಯಮ 377ರ ಅಡಿಯಲ್ಲಿ ಸಮುದ್ರ ತೀರದ ಪವನ ಸಾಮರ್ಥ್ಯದ ಬಗ್ಗೆ ಲೋಕಸಭೆ ಗಮನಸೆಳೆದ ಸಂಸದ ಕ್ಯಾ. ಚೌಟ (more…)