ಕಲ್ಲಡ್ಕ

ಜನವರಿ 6ರಂದು ಬರಿಮಾರು ಶ್ರೀ ಮಹಾಮ್ಮಾಯ ದೇವಸ್ಥಾನದಲ್ಲಿ ಶತಕಲಶಾಭಿಷೇಕ, ಸಹಸ್ರ ಹೂವಿನ ಪೂಜೆ, ಸಾನಿಧ್ಯ ಹವನ

ಜಾಹೀರಾತು

ಶ್ರೀ ಕ್ಷೇತ್ರ ಬರಿಮಾರು ಶ್ರೀ ಮಹಮ್ಮಾಯ ದೇವಸ್ಥಾನದಲ್ಲಿ ವರ್ಷಂಪ್ರತಿ ವಿಜೃಂಭಣೆಯಿಂದ ನಡೆಯುವ ಸಹಸ್ರ ಹೂವಿನ ಪೂಜೆ, ಸಹಸ್ರ ಕರ್ಪೂರಾರತಿ, ಶತಕಲಶಾಭಿಷೇಕ ಮತ್ತು ಸಾನಿಧ್ಯಹವನವನ್ನು ಶ್ರೀ ದೇವಿಯ ಸಾನಿಧ್ಯ ಅಭಿವೃದ್ದಿ ಹಾಗೂ ಎಲ್ಲರ ಶ್ರೇಯೋಭಿವೃದ್ಧಿಗಾಗಿ ಜನವರಿ 6ರಂದು ಶುಕ್ರವಾರ ವಿವಿಧ ಧಾರ್ಮಿಕ ಅನುಷ್ಠಾನಗಳೊಂದಿಗೆ ನಡೆಸಲಾಗುವುದು ಎಂದು ಅನುವಂಶಿಕ ಆಡಳಿತ ಮೊಕ್ತೇಸರರಾದ ಬಿ.ರಾಕೇಶ ಪ್ರಭು ಮತ್ತು ಪ್ರಧಾನ ತಂತ್ರಿಗಳಾದ ಪಂಡಿತ್ ಎಂ.ಕಾಶೀನಾಥ ಆಚಾರ್ಯ ತಿಳಿಸಿದ್ದಾರೆ.

ಬೆಳಗ್ಗೆ 8ಕ್ಕೆ ಪ್ರಾರ್ಥನೆ, 9.30ಕ್ಕೆ ಪಂಚಾಮೃತ ಅಭಿಷೇಕ, 10.30ಕ್ಕೆ ಮಹಾಭಿಷೇಕ, ಶತಕಲಶಾಭಿಷೇಕ, ಪುಳಕಾಭಿಷೇಕ, ಬ್ರಹ್ಮಕಲಶಾಭಿಷೇಕ, ಅಷ್ಟಮಂಗಲ, ನಿರೀಕ್ಷಣೆ, ಪ್ರಸನ್ನ ಪೂಜೆ, ಶ್ರೀದೇವರಿಗೆ ಪಟ್ಟ ಕಾಣಿಕೆ, ಮೂಲಮಂತ್ರ ಹವನ, ಸಾನಿಧ್ಯ ಹವನ ನಡೆಯಲಿದೆ. ಮಧ್ಯಾಹ್ನ 12ಕ್ಕೆ ಮಹಾಪೂಜೆ, ಸೇವಾದಾರರಿಗೆ ಪ್ರಸಾದ ಮತ್ತು ಸಮಾರಾಧನೆ ಇರಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.