ಬಂಟ್ವಾಳ

ಬಂಟ್ವಾಳದಲ್ಲಿ ಎಬಿವಿಪಿ ಅಭ್ಯಾಸ ವರ್ಗ

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಬಂಟ್ವಾಳ ನಗರ ಅಭ್ಯಾಸ ವರ್ಗವು ಬಿಸಿರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆಯಿತು.

ಜಾಹೀರಾತು

ಮಂಗಳೂರು ವಿಭಾಗ ಸಂಚಾಲಕರಾದ ಹರ್ಷಿತ್ ಕೊಯಿಲ, ಮಂಗಳೂರು ವಿಭಾಗ ಎಸ್.ಡಫ್.ಡಿ. ಪ್ರಮುಖರಾದ ನಿಶಾನ್ ಆಳ್ವ, ತಾಲೂಕು ಸಂಚಾಲಕರಾದ ಶಿವಪ್ರಸಾದ್, ನಗರ ಕಾರ್ಯದರ್ಶಿ ಪ್ರತೀಕ್, ತಾಲೂಕು ವಿದ್ಯಾರ್ಥಿ ನಿ ಪ್ರಮುಖರಾದ ಸಮೀಕ್ಷಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಅಭ್ಯಾಸ ವರ್ಗದಲ್ಲಿ ಮೊದಲನೇ ಅವಧಿಯಾದ ಸೈದ್ದಾಂತಿಕ ಭೂಮಿಕೆಯನ್ನು ಹರ್ಷಿತ್ ಕೊಯಿಲ, ನಡೆಸಿಕೊಟ್ಟರು.

ಎರಡನೇ ಅವಧಿ ಕ್ಯಾಂಪಸ್ ಕಾರ್ಯ ಮತ್ತು ನೇತೃತ್ವ ಅವಧಿಯನ್ನು ನಿಶಾನ್ ಆಳ್ವ ನಡೆಸಿಕೊಟ್ಟರು. ಮೂರನೇ ಅವಧಿಯನ್ನು ಅದಿತ್ಯ ಶೆಟ್ಟಿ ಮಂಗಳೂರು ನಡೆಸಿಕೊಟ್ಟರು.

ಸಮಾರೋಪದಲ್ಲಿ ನೂತನ ನಗರದ ಕಾರ್ಯಕಾರಿಣಿ ಘೋಷಣೆಯನ್ನು ಮಂಗಳೂರು ಜಿಲ್ಲಾ ಸಹ ಸಂಚಾಲಕರಾದ ದಿನೇಶ್ ಕೊಯಿಲ, ನಡೆಸಿಕೊಟ್ಟರು. ವೇದಿಕೆಯಲ್ಲಿ ಬಂಟ್ವಾಳ ನಗರ ಕಾರ್ಯದರ್ಶಿ ಪ್ರತೀಕ್ , ನಗರ ವಿದ್ಯಾರ್ಥಿ ನಿ ಪ್ರಮುಖ್ ಇಂಚರ ಉಪಸ್ಥಿತರಿದ್ದರು.  ಹಾಗೂ ಪ್ರಮುಖರಾದ ಆದರ್ಶ್, ಕೀಶೋರ್, ಸುರಕ್ಷಾ , ಪ್ರಣಮ್ , ಬೃಂದಾ ಉಪಸ್ಥಿತರಿದ್ದರು.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.