ಬಂಟ್ವಾಳ

ಎನ್.ಪಿ.ಎಸ್. ನೌಕರರ ಪರ ದನಿ ಎತ್ತುವಂತೆ ಬಂಟ್ವಾಳ ಶಾಸಕರಿಗೆ ಸಂಘ ಮನವಿ

ಜಾಹೀರಾತು

ನೂತನ ಪಿಂಚಣಿ ಯೋಜನೆ ರದ್ದುಪಡಿಸಿ, ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವ ನಿಟ್ಟಿನಲ್ಲಿ ಬೆಳಗಾವಿ ಅಧಿವೇಶನದಲ್ಲಿ ಎನ್‌ಪಿಎಸ್ ನೌಕರರ ಪರ ಧ್ವನಿ ಎತ್ತುವಂತೆ ಆಗ್ರಹಿಸಿ ಬಂಟ್ವಾಳ ತಾಲೂಕು ಸರಕಾರಿ ಎನ್‌ಪಿಎಸ್ ನೌಕರರು ಗುರುವಾರ ಬಿ.ಸಿ.ರೋಡಿನ ಶಾಸಕರ ಕಚೇರಿಯಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರಿಗೆ ಮನವಿ ನೀಡಿದರು.

ಸಂಘಟನೆಯು ಹೋರಾಟವನ್ನು ತೀವ್ರಗೊಳಿಸಿದ್ದು, ಡಿ.19ರ ಮಾಡು ಇಲ್ಲವೇ ಮಡಿ ಹೋರಾಟದ ಮೊದಲು ತಾವು ರಾಜ್ಯದ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಎನ್‌ಪಿಎಸ್ ನೌಕರರ ಬಾಳಿಗೆ ಬೆಳಕಾಗಬೇಕಿದೆ. ರಾಜ್ಯದಲ್ಲಿ ಸುಮಾರು 4 ಲಕ್ಷ ಸರಕಾರಿ, ನಿಗಮಗಳ ಎನ್‌ಪಿಎಸ್ ನೌಕರರಿದ್ದು, 20 ಲಕ್ಷ ಮಂದಿ ಅವಲಂಬಿತರಿದ್ದಾರೆ. ಹೀಗಾಗಿ ನಮ್ಮೆಲ್ಲರ ಪರ ಧ್ವನಿ ಎತ್ತುವಂತೆ ಮನವಿಯಲ್ಲಿ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ತಾಲೂಕು ಸಂಘದ ಅಧ್ಯಕ್ಷ ಸಂತೋಷ್ ಕೋಟ್ಯಾನ್, ಕಾರ್ಯದರ್ಶಿ ಯತೀಶ್ ಪಿ, ಪ್ರಮುಖರಾದ ಮೆಸ್ಕಾಂ ಇಇ ಪ್ರಶಾಂತ್ ಪೈ, ಉಪತಹಸಿಲ್ದಾರ್ ರಾಜೇಶ್ ನಾಯ್ಕ್, ಶಾಸಕರ ಆಪ್ತ ಕಾರ್ಯದರ್ಶಿ ಶಿವಾನಂದ ಪೂಜಾರಿ, ಮೆಸ್ಕಾಂನ ಸಿದ್ಧರಾಜು, ನ್ಯಾಯಾಂಗ ಇಲಾಖೆಯ ರೇಣುಕಾ, ತಾ.ಪಂ.ನ ವೈಲೆಟ್, ಕಂದಾಯ ಇಲಾಖೆಯ ಸೀತಾರಾಮ ಪೂಜಾರಿ, ಶಿಕ್ಷಣ ಇಲಾಖೆಯ ಲಕ್ಷ್ಮಣ ಬೆಲೆಗದ್ದೆ, ರಿಯಾಝ್, ಸುರೇಂದ್ರ ಮೊದಲಾದವರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.