ಬಂಟ್ವಾಳ

ಸ್ವಾವಲಂಬಿ ಕೃಷಿಕನಾಗಲು ಯಂತ್ರೋಪಕರಣ ಸಹಕಾರಿ: ಶಾಸಕ ರಾಜೇಶ್ ನಾಯ್ಕ್

ರಾಷ್ಟ್ರವು ಕೃಷಿ ಕ್ಷೇತ್ರದಲ್ಲಿ ಸ್ವಾವಲಂಬಿ ಆಗುವುದಕ್ಕಾಗಿ ಪ್ರಸ್ತುತ ಕೃಷಿ ಉತ್ವನ್ನದ ಎರಡು ಪಟ್ಟು ಬೆಳೆ ಉತ್ಪನ್ನ ತೆಗೆಯುವುದು ದೇಶದ ಪ್ರಧಾನಿ ನರೇಂದ್ರ ಮೋದಿಯವರ ಆಶಯವಾಗಿದೆ. ಕೃಷಿ ಯಂತ್ರೋಪಕರಣ ಬಳಕೆಯಿಂದ ಈ ಸಾಧನೆ ಮಾಡಲು ಸಾಧ್ಯ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು ಹೇಳಿದರು.

ಜಾಹೀರಾತು

ಬಿ.ಮೂಡ ಗ್ರಾಮದ ಬಿ.ಸಿ.ರೋಡ್ ಮಯ್ಯರ ಬೈಲು ಬಾಳೆಹಿತ್ಲು ಪ್ರದೇಶದಲ್ಲಿ ಭತ್ತ ಕೃಷಿ ಯಂತ್ರ ನಾಟಿ ಸ್ವತ: ಚಾಲನೆ ನೀಡಿ ಬಳಿಕ ನಡೆದ ಸಭೆಯಲ್ಲಿ ದೀಪ ಬೆಳಗಿಸಿ ಮಾತನಾಡಿದರು.

ಬಂಜರು ಭೂಮಿಯಲ್ಲಿ ಭತ್ತದ ಕೃಷಿ ಮಾಡುವ ಪದ್ಧತಿಯು ವರ್ಷದಿಂದ ವರ್ಷಕ್ಕೆ ಆಸಕ್ತ ರೈತರಿಂದ ಪ್ರಗತಿಯಲ್ಲಿದ್ದು ಮುಂದಕ್ಕೆ ಕೃಷಿ ಇನ್ನಷ್ಟು ಪ್ರಗತಿ ಯಾಗುವ ಮೂಲಕ ದೇಶದ ಆಹಾರ ಉತ್ಪಾದನೆಯಲ್ಲಿ ಸ್ವಾಲಂಬಿಗಳಾಗಬೇಕು ಎಂದರು.

ತೋಟಗಾರಿಕಾ ಸಹಾಯಕ ಅಧಿಕಾರಿ ಹರೀಶ್ ಬಂಗೇರ, ವಿಟ್ಲ ಸಿ.ಪಿ.ಸಿ.ಆರ್.ಐ ಕೃಷಿ ವಿಸ್ತರಣಾ ವಿಭಾಗದ ತಾಂತ್ರಿಕ ಅಧಿಕಾರಿ ಪುರಂದರ ಸಿ. ಕೂಟೇಲು, ನಿವೃತ್ತ ಸಹಾಯಕ ಕೃಷಿ ಅಧಿಕಾರಿ ಕೊರಗಪ್ಪ ಮಾತನಾಡಿದರು. ಬಂಜರು ಭೂಮಿ ಭತ್ತದ ಕೃಷಿ ಯೋಜನೆಯ ರೂವಾರಿ ಕರುಣೇಂದ್ರ ಪೂಜಾರಿ ಕೊಂಬರಬೈಲು ಅವರನ್ನು ಶಾಸಕರು ಅಭಿನಂದಿಸಿದರು.

ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ. ಆರ್. , ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೋ ಪ್ರದೀಪ್ ಡಿಸೋಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಯೋಜನಾಧಿಕಾರಿ ಪಿ. ಜಯಾನಂದ, ಪ್ರಗತಿಪರ ಕೃಷಿಕರಾದ ಪದ್ಮನಾಭ ಕೆಲ್ದೋಡಿಗುತ್ತು, ಕೃಷ್ಣರಾಜ ಜೈನ್ ಪಂಜಿಕಲ್ಲು, ವೆಂಕಟರಾವ್ ಬಾಳೆಹಿತ್ಲು, ಪುರುಷೋತ್ತಮ ಬಾಳೆಹಿತ್ಲು,  ಕೆ. ಎನ್. ಶೇಖರ್ ಕೆಳಗಿನ ಪಂಜಿಕಲ್ ಗುತ್ತು, ನಾಗೇಶ್ ಕುಲಾಲ್ ಬಾಳೆಹಿತ್ಲು, ಉಪಸ್ಥಿತರಿದ್ದರು. ಪ್ರಗತಿಪರ ಕೃಷಿಕ ವಾಸು ಮೂಲ್ಯ ಬಾಳೆಹಿತ್ಲು ಮತ್ತು ಕೃಷಿ ನಾಟಿ ಯಂತ್ರದ ನಿರ್ವಹಕ ಶ್ರೀಪತಿ ಗೌಡ ಅವರನ್ನು ಸನ್ಮಾನಿಸಲಾಯಿತು.  ಬೊಲ್ಪು ರೈ.ಉ.ಕ. ನಿರ್ದೇಶಕ ದೇವಪ್ಪ ಕುಲಾಲ್ ಪಂಜಿಕಲ್ ಸ್ವಾಗತಿಸಿದರು.  ಕೃಷಿ ಅಧಿಕಾರಿ ನಂದನ್ ಶೆಣೈ ಪ್ರಸಾವನೆ ನೀಡಿದರು,  ಬೊಲ್ಪು ರೈತ ಉತ್ವಾದಕರ ಕಂಪೆನಿ ಅಧ್ಯಕ್ಷ ರಾಜಾ ಬಂಟ್ವಾಳ್ ವಂದಿಸಿದರು, ಸಹಾಯಕ ಕೃಷಿ ಅಧಿಕಾರಿ ಹನುಮಂತಪ್ಪ ಕಾರ್ಯಕ್ರಮ ನಿರ್ವಹಿಸಿದರು.

 

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.