ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಬಂಟ್ವಾಳದಲ್ಲಿ ನಡೆಯಿತು.
ಜಿಲ್ಲಾ ಗವರ್ನರ್ ರವೀಂದ್ರ ಭಟ್ ಅವರು ನೂತನ ಅಧ್ಯಕ್ಷ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರಿಗೆ ಪದಪ್ರದಾನ ಮಾಡಿದರು. ಮುಖ್ಯ ಆತಿಥಿಯಾಗಿ ಮಂಜುನಾಥ ಆಚಾರ್ಯ, ರಮೇಶ್, ಕೆ.ಎನ್.ಗಂಗಾಧರ ಆಳ್ವ ಭಾಗವಹಿಸಿದ್ದರು.
ಈ ಸಂದರ್ಭ ನಿರ್ಗಮಿತ ಅಧ್ಯಕ್ಷ ಶನ್ಫತ್ ಶರೀಫ್, ನೂತನ ಕಾರ್ಯದರ್ಶಿ ಉಮೇಶ್ ಆರ್ .ಮೂಲ್ಯ, ಕಾರ್ಯನಿರ್ವಾಹಕ ಕಾರ್ಯದರ್ಶಿ ಕಿಶೋರ್ ಕುಮಾರ್, 2023-24ರ ಅಧ್ಯಕ್ಷ ಸುರೇಶ್ ಸಾಲಿಯಾನ್, ಪದಾಧಿಕಾರಿಗಳಾದ ಗಾಯತ್ರಿ ಲೋಕೇಶ್, ನರೇಂದ್ರನಾಥ ಭಂಡಾರಿ, ವಚನ್ ಶೆಟ್ಟಿ, ಹಂಝ ಬಸ್ತಿಕೋಡಿ, ಸುರೇಶ್ ಕುಮಾರ್ ನಾವೂರು, ಡಾ. ಸಂತೋಷ್ ಬಾಬು, ನಾರಾಯಣ ಸಿ.ಪೆರ್ನೆ, ಜಯರಾಜ್ ಎಸ್. ಬಂಗೇರ, ನೌಶೀಕ್, ಹನೀಫ್, ಯಾಸ್ಮಿನ್, ಮನೋಜ್ ಕನಪಾಡಿ, ಸುರೇಶ್ ಸಾಗರ್, ಸುಕುಮಾರ್, ಮೊಹಮ್ಮದ್ ಮುನೀರ್, ಸುರೇಶ್ ಬಂಟ್ವಾಳ ಇದ್ದರು. ಈ ಸಂದರ್ಭ ವಿವಿಧ ಸಮಾಜಮುಖಿ ಯೋಜನೆಗಳನ್ನು ಘೋಷಿಸಲಾಯಿತು.
Former Chief Minister M.Veerappa Moily visit Senior Congress Leader Former Central Minister B.Janardhan Poojary Residence…