ಬಂಟ್ವಾಳ

ಅಧಿಕಾರ ಇಲ್ಲದಾಗ ಪಕ್ಷದ ಸಭೆಗಳಿಗೆ ಹಾಜರಾಗುವವರೇ ನೈಜ ಕಾಂಗ್ರೆಸ್ಸಿಗರು : ಬಿ ರಮಾನಾಥ ರೈ

www.bantwalnews.com Report ಬಂಟ್ವಾಳನ್ಯೂಸ್ ವರದಿ ಸಂಪಾದಕ: ಹರೀಶ ಮಾಂಬಾಡಿ, ಜಾಹೀರಾತುಗಳಿಗೆ ಸಂಪರ್ಕಿಸಿ: 9448548127

ಬಂಟ್ವಾಳ: ಬಂಟ್ವಾಳ ಬ್ಲಾಕ್ ಕಾಂಗ್ರೆಸ್‌ನ ಅಮ್ಟಾಡಿ ಗ್ರಾಮ ಪಂಚಾಯತ್‌ಗೆ ಒಳಪಟ್ಟ ಬೂತ್ ಅಧ್ಯಕ್ಷರ ಮನೆ ಮನೆ ಭೇಟಿ ನಮ್ಮ ನಡೆ ಬೂತ್ ಕಡೆ ಕಾರ್ಯಕ್ರಮ ಮಾಜಿ ಸಚಿವ ಬಿ ರಮಾನಾಥ ರೈಮಾರ್ಗದರ್ಶನದಲ್ಲಿ ಬೂತ್ ಅಧ್ಯಕ್ಷರ ನಿವಾಸದಲ್ಲಿ ನಡೆಯಿತು. ರಮಾನಾಥ ರೈ ಮಾತನಾಡಿ ಅಧಿಕಾರ ಇಲ್ಲದಾಗ ಪಕ್ಷದ ಸಭೆಗಳಿಗೆ ಹಾಜರಾಗುವವರೇ ನೈಜ ಕಾಂಗ್ರೆಸ್ಸಿಗರು. ನಿಮ್ಮ ಋಣವನ್ನು ಎಂದೆಂದಿಗೂ ಮರೆಯಲು ಅಸಾಧ್ಯ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಮಾತನಾಡಿ ಬೂತ್ ಸಮಿತಿ ಒಂದು ಕಟ್ಟಡದ ಅಡಿಪಾಯ ಇದ್ದಂತೆ. ಬೂತ್ ಬಲಿಷ್ಠವಾದಲ್ಲಿ ಪಕ್ಷವು ಬಲಿಷ್ಠವಾಗಿ ಇರಲು ಸಾಧ್ಯವಾಗುವುದು ಎಂದರು. ಮತದಾರ ಪಟ್ಟಿ ಪರಿಷ್ಕರಣೆಯನ್ನು ಅತೀ ಅಗತ್ಯವಾಗಿ ನಡೆಸುವಂತೆ ಕರೆ ನೀಡಿದರು.

ಜಾಹೀರಾತು

ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಸದಸ್ಯರಾದ ಮಲ್ಲಿಕಾ ವಿ ಶೆಟ್ಟಿ, ಫ್ಲೋಸಿ ಡಿಸೋಜ, ಯುವ ಕಾಂಗ್ರೆಸ್ ಅಧ್ಯಕ್ಷರಾದ ಸುರೇಶ್ ಪೂಜಾರಿ ಜೋರಾ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ್ ಶೆಟ್ಟಿ, ಬೂತ್ ಸಮಿತಿ ಅಧ್ಯಕ್ಷರಾದ ರಾಮಚಂದ್ರ ಕಾಯರ್‌ಮಾರ್, ತೋಮಸ್ ಸಲ್ಡಾನ್ಹ, ತಾರನಾಥ ಪೂಜಾರಿ, ಪಂಚಾಯತ್ ಸದಸ್ಯರಾದ  ಪೂರ್ಣಿಮಾ, ಚಂದ್ರಾವತಿ, ಮುಖಂಡರಾದ ರಾಮಣ್ಣ ಪೂಜಾರಿ, ಪ್ರಭಾಕರ್, ನಿತ್ಯಾನಂದ ಕಲಾಯಿ, ಅರುಣ್ ಪಿಂಟೋ, ವೆಂಕಪ್ಪ ಪೂಜಾರಿ, ಲೋಯ್ಡ್ ಮೊನೊಹರ್ ಡಿಕಾಸ್ಟ, ಚರಣ್, ಸುಮಿತ್ ಸುವರ್ಣ, ಫೆಲಿಕ್ಸ್ ಪಿಂಟೋ, ನಿಚಲ್ ಡಿಸೋಜ, ಮೆಲ್ವಿನ್ ಸಲ್ಡಾನ್ಹ, ಜೋಕ್ಷನ್, ಜೇಮ್ಸ್, ಡೊನಾಲ್ಡ್, ಲಕ್ಷ್ಮಣ ಪೂಜಾರಿ, ದಾಮೋದರ್ ಪೂಜಾರಿ, ಸತೀಶ್, ಸ್ವಸ್ತಿಕ್ ಆಚಾರ್ಯ ,ಪ್ರತಿಭಾ ಸುವರ್ಣ, ಮ್ಯಾಕ್ಸಿಮ್ ಲೋಬೋ, ಸುಂದರಿ, ಶಾಲಿನಿ, ಶಮಂತ್ ಪೂಜಾರಿ, ವಲೇರಿಯನ್ ಲೋಬೋ, ಫ್ಲೋರಿನ್ ಲೋಬೋ ಉಪಸ್ಥಿತರಿದ್ದರು.

ಜಾಹೀರಾತು
Harish Mambady

2016ರಲ್ಲಿ ಆರಂಭಿಸಿದ ಬಂಟ್ವಾಳ ತಾಲೂಕಿನ ಮೊದಲ ವೆಬ್ ಪತ್ರಿಕೆ. ಲಕ್ಷಾಂತರ ಮಂದಿ ಓದಿದ್ದಾರೆ, ಓದುತ್ತಿದ್ದಾರೆ. ಸುದ್ದಿಗಳು, ವಿಶ್ಲೇಷಣೆಗೆ ಆದ್ಯತೆ. ಒಂಭತ್ತನೇ ವರ್ಷಕ್ಕೆ ಕಾಲಿಟ್ಟಿರುವ www.bantwalnews.comಗೆ ಆರ್ಥಿಕ ಸಹಕಾರವೂ ಬೇಕು. ಪ್ರಾಯೋಜಕತ್ವ ಅಥವಾ ಜಾಹೀರಾತು ನೀಡುವುದಿದ್ದರೆ 9448548127 ಸಂಪರ್ಕಿಸಬಹುದು.  --- ಹರೀಶ ಮಾಂಬಾಡಿ, ಸಂಪಾದಕ NOTE: : All opinions regarding the articles published in bantwalnews and the related topic are those of the author, and this has no relation to BantwalNews. Recommendations and suggestions provided here are left for the readers' consideration.